ಕರ್ನಾಟಕ

karnataka

ಕೊರೊನಾ ಸಮಯದಲ್ಲಿ ಸಿದ್ದರಾಮಯ್ಯ ಹೊರಗೇ ಬಂದಿಲ್ಲ: ಸಚಿವ ಭೈರತಿ ಬಸವರಾಜ್​ ಲೇವಡಿ

By

Published : Jul 4, 2020, 10:12 PM IST

ಕೊರೊನಾ ವೈದ್ಯಕೀಯ ಉಪಕರಣೆಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂಬ ಮಾಜಿ ಸಿಎಂ ಸಿದ್ದರಾಮಯ್ಯ ಆರೋಪಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಭೈರತಿ ಬಸವರಾಜ್​​​, ನಾವು ಯಾವುದೇ ಉಪಕರಣ ಖರೀದಿಸಿರುವುದಕ್ಕೆ ಲೆಕ್ಕ ಪತ್ರಗಳಿವೆ. ಶ್ವೇತಪತ್ರ ಹೊರಡಿಸಲು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಿದ್ಧರಿದ್ದಾರೆ ಎಂದು ಸ್ಪಷ್ಟಪಡಿಸಿದರು.

Siddaramaiah doesn't came outside in time of corona: Bairathi basavaraj
‘ಕೊರೊನಾ ವೇಳೆ ಸಿದ್ದರಾಮಯ್ಯ ಹೊರಗೇ ಬಂದಿಲ್ಲ’: ಭೈರತಿ ಬಸವರಾಜ್​ ಲೇವಡಿ

ಚಿತ್ರದುರ್ಗ:ಮಾಜಿ ಸಿಎಂ ಸಿದ್ದರಾಮಯ್ಯ ಕೂಡ ಕೋವಿಡ್-19 ಸಂದರ್ಭದಲ್ಲಿ 10 ಆಸ್ಪತ್ರೆಗಳ ಜವಾಬ್ದಾರಿ ನಿರ್ವಹಣೆ ಮಾಡಬಹುದಿತ್ತು. ಅದರೆ ಅವರು ಈ ವೇಳೆ ಮನೆಯಿಂದ ಹೊರ ಬಂದಿಲ್ಲ ಎಂದು ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ್ ಲೇವಡಿ ಮಾಡಿದರು.

ಕೊರೊನಾ ವೇಳೆ ಸಿದ್ದರಾಮಯ್ಯ ಹೊರಗೇ ಬಂದಿಲ್ಲ: ಸಚಿವ ಭೈರತಿ ಬಸವರಾಜ್​ ಲೇವಡಿ

ಕೊರೊನಾ ಉಪಕರಣಗಳ ಖರೀದಿಯಲ್ಲಿ ಸರ್ಕಾರ ಅವ್ಯವಹಾರ ನಡೆದಿದೆ ಎಂಬ‌ ಸಿದ್ದರಾಮಯ್ಯನವರ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಮಾಜಿ ಸಿಎಂ ಸಿದ್ದರಾಮಯ್ಯ ಮನೆಯಿಂದ ಈಚೆ ಬಂದಿರುವುದು ನೋಡಿದ್ದಿರಾ ಎಂದು ಪ್ರಶ್ನೆ ಮಾಡಿದರು.

ದಾಖಲೆ ಬಿಡುಗಡೆ ಮಾಡಲಿ, ತನಿಖೆಗೆ ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್ ಸಿದ್ಧರಿದ್ದಾರೆ. ಆದರೆ ವಿರೋಧ ಪಕ್ಷದವರು ಆರೋಪ ಮಾಡ್ಬೇಕಾಗಿದೆ. ಅದಕ್ಕೆ ಆರೋಪ ಮಾಡುತ್ತಿದ್ದು, ಇದರಲ್ಲಿ ಸತ್ಯಾಂಶ ಇಲ್ಲ ಎಂದರು.

ನಾವು ಯಾವುದೇ ಉಪಕರಣ ಖರೀದಿಸಿರುವುದಕ್ಕೆ ಲೆಕ್ಕ ಪತ್ರಗಳಿವೆ. ಶ್ವೇತಪತ್ರ ಹೊರಡಿಸಲು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಿದ್ಧರಿದ್ದಾರೆ ಎಂದು ಸ್ಪಷ್ಟಪಡಿಸಿದರು.

ABOUT THE AUTHOR

...view details