ಕರ್ನಾಟಕ

karnataka

By

Published : Jan 24, 2020, 10:05 AM IST

ETV Bharat / state

ತಡರಾತ್ರಿ ಆಸ್ಪತ್ರೆಗೆ ಭೇಟಿ ನೀಡಿದ ರಾಮುಲು: ರೋಗಿಗಳಿಂದಲೇ ಸಮಸ್ಯೆ ಆಲಿಸಲು ವಾಸ್ತವ್ಯ

ಮೈಸೂರು ಹಾಗೂ ಹೆಚ್ ಡಿ ಕೋಟೆ ಕಾರ್ಯಕ್ರಮದಿಂದ ತಡರಾತ್ರಿ 12 ಗಂಟೆಗೆ ಬಂದ ಕಾರಣ ಜಿಲ್ಲಾಸ್ಪತ್ರೆಯ ಕುಂದು ಕೊರತೆಗಳನ್ನ ರೋಗಿಗಳಿಂದಲೇ ಆಲಿಸಲು ಸಾಧ್ಯವಾಗದೆ ವಾಸ್ತವ್ಯ ಹೂಡಿ ಬೆಳಗ್ಗೆ ಸಮಸ್ಯೆಗಳನ್ನು ವಿಚಾರಿಸುವುದಾಗಿ ಆರೋಗ್ಯ ಸಚಿವ ಬಿ. ಶ್ರೀರಾಮುಲು ತಿಳಿಸಿದರು.

ramulu-is-a-stay-at-chitradurga-district-hospital
ಚಿತ್ರದುರ್ಗದ ಆಸ್ಪತ್ರೆಯಲ್ಲಿ ವಾಸ್ತವ್ಯ ಹೂಡಿದ ಆರೊಗ್ಯ ಸಚಿವ

ಚಿತ್ರದುರ್ಗ:ಮೈಸೂರು ಹಾಗೂ ಹೆಚ್ ಡಿ ಕೋಟೆ ಕಾರ್ಯಕ್ರಮದಿಂದ ತಡರಾತ್ರಿ 12 ಗಂಟೆಗೆ ಬಂದ ಕಾರಣ ಜಿಲ್ಲಾಸ್ಪತ್ರೆಯ ಕುಂದು ಕೊರತೆಗಳನ್ನ ರೋಗಿಗಳಿಂದಲೇ ಆಲಿಸಲು ಸಾಧ್ಯವಾಗದೆ ವಾಸ್ತವ್ಯ ಹೂಡಿ ಬೆಳಗ್ಗೆ ಸಮಸ್ಯೆಗಳನ್ನು ವಿಚಾರಿಸುವುದಾಗಿ ಆರೋಗ್ಯ ಸಚಿವ ಬಿ. ಶ್ರೀರಾಮುಲು ತಿಳಿಸಿದರು.

ಚಿತ್ರದುರ್ಗದ ಆಸ್ಪತ್ರೆಯಲ್ಲಿ ವಾಸ್ತವ್ಯ ಹೂಡಿದ ಆರೊಗ್ಯ ಸಚಿವ

ಕಳೆದ ಬಾರಿ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿದಾಗ ಸಾಕಷ್ಟು ಬದಲಾವಣೆ ಮಾಡಲು ಸೂಚನೆ ನೀಡಿದ್ದೆ. ಬಡ ರೋಗಿಗಳಿಂದ ಲಂಚ ಸ್ವೀಕಾರ ಮಾಡುವವರನ್ನು ಕ್ಷಮಿಸುವುದಿಲ್ಲ, ಹಾಗೇನಾದರೂ ಲಂಚ ಸ್ವೀಕರಿಸಿದರೆ ಅಂತವರ ವಿರುದ್ಧ ಕಠಿಣ ಕ್ರಮ ಜರುಗಿಸುವುದಾಗಿ ತಿಳಿಸಿದರು.

ಹೊರಗುತ್ತಿಗೆ ಆಧಾರದ ಮೇಲೆ ಡಿ ದರ್ಜೆಯ ಕೆಲಸಗಾರಿಗೆ ಮುಂದಿನ ದಿನಗಳಲ್ಲಿ ಅನುಕೂಲ ಮಾಡಿಕೊಡುವುದಾಗಿ ಹೇಳಿದರು. ತಡರಾತ್ರಿ ಬಂದ ಕಾರಣ ಯಾವುದೇ ಸಮಸ್ಯೆ ಕುರಿತು ಚರ್ಚಿಸದೆ ಆಸ್ಪತ್ರೆಯ ವಿಐಪಿ ವಾರ್ಡ್​​ನ ಎಸಿ ಕೊಠಟಿಗೆ ಹೋಗಿ ನಿದ್ರೆಗೆ ಜಾರಿದರು.

For All Latest Updates

TAGGED:

ABOUT THE AUTHOR

...view details