ಕರ್ನಾಟಕ

karnataka

By

Published : Nov 7, 2021, 5:37 PM IST

ETV Bharat / state

ಚಿತ್ರದುರ್ಗ: ಗರಗ ಗ್ರಾಮಸ್ಥರಿಂದ ಪುನೀತ್​ ಪುಣ್ಯತಿಥಿ

ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲೂಕಿನ ಗರಗ ಗ್ರಾಮದಲ್ಲಿನ ಗ್ರಾಮಸ್ಥರು ನಟ ಪುನೀತ್​ ರಾಜ್​ ಕುಮಾರ್ ಅವರ ಪುಣ್ಯತಿಥಿ ಮಾಡಿದ್ದಾರೆ.

Villagers made Puneeth rajkumar 10th rituals
ಪುನೀತ್​ ಪುಣ್ಯತಿಥಿ ಮಾಡಿದ ಗರಗ ಗ್ರಾಮಸ್ಥರು

ಚಿತ್ರದುರ್ಗ:ಹೃದಯ ಸ್ತಂಭನದಿಂದ ನಿಧನರಾದ ಸ್ಯಾಂಡಲ್​ವುಡ್​ ನಟ ಪುನೀತ್​ ರಾಜ್​ ಕುಮಾರ್​ ಅವರ ಪುಣ್ಯತಿಥಿಯನ್ನು ಗರಗ ಗ್ರಾಮದಲ್ಲಿನ ಗ್ರಾಮಸ್ಥರು ಮಾಡಿದರು.


ನಟನೆ, ಸರಳತೆ, ಆತ್ಮೀಯ ಗುಣಗಳಿಂದ ಅಪ್ಪು ಕೋಟ್ಯಂತರ ಅಭಿಮಾನಿಗಳನ್ನು ಹೊಂದಿದ್ದಾರೆ. ಅವರ ಅಕಾಲಿಕ ನಿಧನವನ್ನು ಅರಗಿಸಿಕೊಳ್ಳಲು ಅಭಿಮಾನಿಗಳಿಗೆ ಇನ್ನೂ ಸಾಧ್ಯವಾಗುತ್ತಿಲ್ಲ. ಅಪ್ಪು ನಮ್ಮನ್ನಗಲಿ ಇಂದಿಗೆ 10 ದಿನಗಳು ಕಳೆದಿವೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯ ಹೊಸದುರ್ಗ ತಾಲೂಕಿನ ಗರಗ ಗ್ರಾಮದಲ್ಲಿ ಗ್ರಾಮಸ್ಥರು ಸೇರಿಕೊಂಡು ಪುಣ್ಯತಿಥಿ ಮಾಡಿದರು.

ಪುನೀತ್​ ಭಾವಚಿತ್ರವನ್ನಿಟ್ಟು ಪೂಜೆ ಮಾಡಿ ಅಪ್ಪುಗೆ ಇಷ್ಟವಾದ ಎಲ್ಲಾ ತರದಹದ ತಿಂಡಿ-ತಿನಿಸುಗಳನ್ನು ಮಾಡಿ ಸಮರ್ಪಣೆ ಮಾಡಿದರು. ಬಳಿಕ ಜನರಿಗೆ ಅನ್ನ ಸಂತರ್ಪಣೆ ನಡೆಯಿತು. ಈ ವೇಳೆ ಮಹಿಳೆಯರು, ಮಕ್ಕಳು, ವೃದ್ಧರು ಸೇರಿದಂತೆ ಗ್ರಾಮಸ್ಥರು ಭಾಗವಹಿಸಿದ್ದರು.

ಇದನ್ನೂ ಓದಿ: ನಾಳೆ ಪುನೀತ್ ರಾಜ್‍ಕುಮಾರ್ 11ನೇ ದಿನದ ಪುಣ್ಯತಿಥಿ: ಕುಟುಂಬಸ್ಥರಿಂದ ಸಕಲ ಸಿದ್ಧತೆ

ABOUT THE AUTHOR

...view details