ಚಿತ್ರದುರ್ಗ:ಗಾಂಜಾ ಅಡ್ಡೆ ಮೇಲೆ ದಾಳಿ ನಡೆಸಿ 1.8 ಕೆಜಿ ಗಾಂಜಾವನ್ನು ವಶಪಡಿಸಿಕೊಂಡಿರುವ ಘಟನೆ ಜಿಲ್ಲೆಯ ಮೊಳಕಾಲ್ಮೂರು ತಾಲೂಕಿನ ಬೈರಾಪೂರ ಗ್ರಾಮದಲ್ಲಿ ನಡೆದಿದೆ.
ಮೊಳಕಾಲ್ಮೂರಲ್ಲಿ ಅಬಕಾರಿ ಅಧಿಕಾರಿಗಳ ದಾಳಿ... 1.8 ಕೆಜಿ ಗಾಂಜಾ ವಶ - ಚಿತ್ರದುರ್ಗ ಕ್ರೈಮ್ ಲೆಟೆಸ್ಟ್ ನ್ಯೂಸ್
ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲೂಕಿನ ಬೈರಾಪೂರ ಗ್ರಾಮದಲ್ಲಿ ಅಬಕಾರಿ ಅಧೀಕ್ಷಕ ಹಾಗೂ ರಾಜ್ಯ ವಿಚಕ್ಷಣದಳ ಮುಖ್ಯಸ್ಥ ಮೋತಿಲಾಲ್ ಮಾರ್ಗದರ್ಶನದಲ್ಲಿ ಸಿಬ್ಬಂದಿಗಳು ಈ ಕಾರ್ಯಾಚರಣೆ ನಡೆಸಿ, 1.8 ಕೆಜಿ ಒಣ ಗಾಂಜಾವನ್ನು ಜಪ್ತಿ ಮಾಡಿದ್ದಾರೆ.
![ಮೊಳಕಾಲ್ಮೂರಲ್ಲಿ ಅಬಕಾರಿ ಅಧಿಕಾರಿಗಳ ದಾಳಿ... 1.8 ಕೆಜಿ ಗಾಂಜಾ ವಶ ಗಾಂಜಾ ಅಡ್ಡೆ ಮೇಲೆ ದಾಳಿ](https://etvbharatimages.akamaized.net/etvbharat/prod-images/768-512-6009587-thumbnail-3x2-kopfla.jpg)
Police arrested accused
ಪ್ರಕಾಶ್ ಬಂಧಿತ ಆರೋಪಿ. ಅಬಕಾರಿ ಅಧೀಕ್ಷಕ ಹಾಗೂ ರಾಜ್ಯ ವಿಚಕ್ಷಣದಳ ಮುಖ್ಯಸ್ಥ ಮೋತಿಲಾಲ್ ಅವರ ಮಾರ್ಗದರ್ಶನದಲ್ಲಿ ಸಿಬ್ಬಂದಿಗಳು ಈ ಕಾರ್ಯಾಚರಣೆ ನಡೆಸಿದ್ದಾರೆ. ದಾಳಿ ವೇಳೆ 1.8 ಕೆಜಿ ಒಣ ಗಾಂಜಾವನ್ನು ಜಪ್ತಿ ಮಾಡಿದ್ದಾರೆ. ಗಾಂಜಾ ಮಾರುತ್ತಿದ್ದ ಆರೋಪಿಯನ್ನು ವಿಚಾರಣೆ ನಡೆಸಲಾಗುತ್ತಿದ್ದು, ರಾಜ್ಯ ವಿಚಕ್ಷಣ ದಳದಿಂದ ಪ್ರಕರಣ ದಾಖಲಾಗಿದೆ.