ಕರ್ನಾಟಕ

karnataka

ETV Bharat / state

ಹೆಚ್.ಡಿ. ರೇವಣ್ಣ ವರ್ಗಾವಣೆ ದಂಧೆಕೋರ; ಕೆ.ಎಸ್ ಈಶ್ವರಪ್ಪ ಆರೋಪ

ಕಾಂಗ್ರೆಸ್ ಜೀವ ಉಳಿಸಿಕೊಳ್ಳಲು ರೈತಸಂಘ ಮತ್ತಿತರರ ಬೆಂಬಲ ಕೋರುತ್ತಿದೆ. ಕಾಂಗ್ರೆಸ್​ನಲ್ಲಿ‌ ಸಿದ್ಧರಾಮಯ್ಯ, ಡಿಕೆಶಿ ನಡುವೆ ಪೈಪೋಟಿ ನಡೆದಿದೆ ಎಂದು ಸಚಿವ ಈಶ್ವರಪ್ಪ ಮಾಜಿ ಸಿಎಂ ಸಿದ್ಧರಾಮಯ್ಯಗೆ ಟಾಂಗ್ ನೀಡಿದರು.

By

Published : Jul 23, 2020, 10:40 PM IST

KS Eshwarappa
ಕೆ.ಎಸ್ ಈಶ್ವರಪ್ಪ

ಚಿತ್ರದುರ್ಗ:ಮಾಜಿ ಸಚಿವ ಹೆಚ್.ಡಿ. ರೇವಣ್ಣ ಅನುಭವಿ ವರ್ಗಾವಣೆ ದಂಧೆಕೋರ ಎಂದು ಪಂಚಾಯತ್ ರಾಜ್ ಸಚಿವ ಕೆ.ಎಸ್. ಈಶ್ವರಪ್ಪ ರೇವಣ್ಣಗೆ ತಿರುಗೇಟು ನೀಡಿದರು.

ಚಿತ್ರದುರ್ಗ ನಗರದಲ್ಲಿ ಪ್ರತಿಕ್ರಿಯಿಸಿದ ಅವರು, ವಿಪಕ್ಷ ನಾಯಕರಿಂದ ಕಾಂಗ್ರೆಸ್ ಜೀವಂತಿಕೆ ತೋರಿಕೆಗೆ ಹೋರಾಟ‌ ನಡೆಸುತ್ತಿದೆ. ಕೊರೊನಾ ವೇಳೆ ಸಹಕಾರ ಬದಲು ಹುಳುಕು ಹುಡುಕುವ ಪ್ರಯತ್ನ ಮಾಡುತ್ತಿದೆ ಎಂದರು.

ರೈತ ಸಂಘಟನೆ‌ ಜತೆ ಕಾಂಗ್ರೆಸ್​ನಿಂದ ಬಿಜೆಪಿ ಸರ್ಕಾರದ ವಿರುದ್ಧ ಹೋರಾಟದ ವಿಚಾರವಾಗಿ ಮಾತನಾಡಿದ ಅವರು, ಕಾಂಗ್ರೆಸ್ ಶಕ್ತಿಹೀನವಾಗಿದ್ದು, ರೈತ ಸಂಘದ ಸಾಥ್ ಪಡೆಯುತ್ತಿದೆ. ಕಾಂಗ್ರೆಸ್ ಜೀವ ಉಳಿಸಿಕೊಳ್ಳಲು ರೈತಸಂಘ ಮತ್ತಿತರರ ಬೆಂಬಲ ಕೋರುತ್ತಿದೆ. ಕಾಂಗ್ರೆಸ್​ನಲ್ಲಿ‌ ಸಿದ್ಧರಾಮಯ್ಯ, ಡಿಕೆಶಿ ನಡುವೆ ಪೈಪೋಟಿ ನಡೆದಿದೆ ಎಂದು ಸಚಿವ ಈಶ್ವರಪ್ಪ ಮಾಜಿ ಸಿಎಂ ಸಿದ್ಧರಾಮಯ್ಯಗೆ ಟಾಂಗ್ ನೀಡಿದರು.

ಸದ್ಯದ ಪರಿಸ್ಥಿತಿಯಲ್ಲಿ ಗ್ರಾ.ಪಂ‌ ಚುನಾವಣೆ ನಡೆಯುವ ಸ್ಥಿತಿಯಿಲ್ಲ. ಚುನಾವಣಾ ಆಯೋಗ ಸೂಚನೆ ನೀಡಿದಾಗ ಚುನಾವಣೆಗೆ ಸಿದ್ಧ. ಭಗವಂತನ ದಯೆಯಿಂದ ಕೊರೊನಾ ಹೋಗಿ ಚುನಾವಣೆ ಆಗುವಂತಾದರೆ ಸಂತೋಷ ಎಂದರು.

For All Latest Updates

TAGGED:

ABOUT THE AUTHOR

...view details