ಕರ್ನಾಟಕ

karnataka

By

Published : Sep 9, 2020, 8:50 PM IST

ETV Bharat / state

'ಡ್ರಗ್ಸ್ ದಂಧೆ ಬಯಲಿಗೆಳೆಯಲು ಯಾರಿಗೂ ಧೈರ್ಯ ಇರಲಿಲ್ಲ, ಇದನ್ನು ನಮ್ಮ ಸರ್ಕಾರ ಮಾಡಿದೆ'

ಡ್ರಗ್ಸ್ ಮಾಫಿಯಾವನ್ನು ನಮ್ಮ ಸರ್ಕಾರ ಬಯಲುಗೊಳಿಸಿದ್ದು, ಇದಕ್ಕಾಗಿ ನಮ್ಮ ಸರ್ಕಾರಕ್ಕೆ ಶಹಬ್ಬಾಶ್ ಗಿರಿ ಕೊಡಬೇಕಾಗುತ್ತದೆ. ಇದಕ್ಕೂ ಮೊದಲು ಯಾರಿಗೂ ಇದನ್ನು ಬಯಲಿಗೆಳೆಯಲು ಧೈರ್ಯ ಇರಲಿಲ್ಲ ಎಂದು ಪೌರಾಡಳಿತ ಸಚಿವ ನಾರಾಯಣಗೌಡ ಹೇಳಿದ್ದಾರೆ.

ಪೌರಾಡಳಿತ ಸಚಿವ ನಾರಾಯಣಗೌಡ
ಪೌರಾಡಳಿತ ಸಚಿವ ನಾರಾಯಣಗೌಡ

ಚಿತ್ರದುರ್ಗ: ಡ್ರಗ್ಸ್ ಮಾಫಿಯಾವನ್ನು ಬಯಲಿಗೆಳೆಯಲು ಯಾರಿಗೂ ಧೈರ್ಯ ಇರಲಿಲ್ಲ. ಆದ್ರೆ ಈ ಕೆಲಸವನ್ನು ನಮ್ಮ ಸರ್ಕಾರ ಮಾಡಿದೆ ಎಂದು ಪೌರಾಡಳಿತ ಸಚಿವ ನಾರಾಯಣಗೌಡ ಹೇಳಿದ್ದಾರೆ.

ಚಿತ್ರದುರ್ಗ ನಗರದಲ್ಲಿ ಮಾತನಾಡಿದ ಅವರು, ಡ್ರಗ್ಸ್ ಮಾಫಿಯಾವನ್ನು ನಮ್ಮ ಸರ್ಕಾರ ಬಯಲುಗೊಳಿಸಿದ್ದು, ಅದಕ್ಕಾಗಿ ನಮ್ಮ ಸರ್ಕಾರಕ್ಕೆ ಶಹಬ್ಬಾಶ್ ಗಿರಿ ಕೊಡಬೇಕಾಗುತ್ತದೆ. ಅನೇಕ ವರ್ಷದಿಂದ ಈ ಮಾಫಿಯಾದ ಬಗ್ಗೆ ದೊಡ್ಡಮಟ್ಟದಲ್ಲಿ ಚರ್ಚೆ ನಡೀತಿತ್ತು. ಡ್ರಗ್ಸ್ ಮಾಫಿಯಾ ಬಯಲುಗೊಳಿಸಲು ಯಾರಿಗೂ ಧೈರ್ಯ ಇರಲಿಲ್ಲ ಎಂದರು.

ಪೌರಾಡಳಿತ ಸಚಿವ ನಾರಾಯಣಗೌಡ

ಪ್ರತಿಪಕ್ಷದವರ ವಿರುದ್ಧ ಪ್ರತಿಕ್ರಿಯಿಸಿದ ಅವರು, ಈ ಮಾಫಿಯಾ ಬಗ್ಗೆ ಏನು ಬೇಕಾದರು ಹೇಳಬಹುದು ಅವರಿಗೆ ಮೂಗುದಾರವಿಲ್ಲ. ಸರ್ಕಾರದಲ್ಲಿದ್ದವರು ಅವರಂತೆ ಹೇಳೋಕೆ ಆಗೋದಿಲ್ಲ. ಡ್ರಗ್ಸ್ ಮಾಫಿಯಾದಲ್ಲಿ ಭಾಗಿಯಾದವರ ಬಗ್ಗೆ ಕೆಲ ದಿನದಲ್ಲಿ ತಿಳಿಯಲಿದ್ದು, ಇದ್ರಲ್ಲಿ ಯಾರೇ ಭಾಗಿಯಾಗಿದ್ರು ನಮ್ಮ‌ ಸರ್ಕಾರ ಅವರನ್ನು‌ ಬಿಡುವುದಿಲ್ಲ ಎಂದರು.

ABOUT THE AUTHOR

...view details