ಕರ್ನಾಟಕ

karnataka

ETV Bharat / state

ಮುರುಘಾ ಮಠದ ಫೋಟೋ ಕಳ್ಳತನ ಪ್ರಕರಣ: ಮತ್ತೆ ಕೆಲವರ ವಿಚಾರಣೆ - ಮುರುಘಾ ಮಠದಲ್ಲಿ ನಡೆದ ಫೋಟೊ ಕಳ್ಳತನ ಪ್ರಕರಣ

ಮುರುಘಾ ಮಠದ ಫೋಟೋ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಮಠದ ಮಾಜಿ ಆಡಳಿತಾಧಿಕಾರಿ ಎಸ್.ಕೆ. ಬಸವರಾಜನ್ ಅವರನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

murugha-math-photo-theft-case-update
ಮುರುಘಾ ಮಠದ ಫೋಟೋ ಕಳ್ಳತನ ಪ್ರಕರಣ

By

Published : Nov 10, 2022, 12:15 PM IST

Updated : Nov 10, 2022, 12:44 PM IST

ಚಿತ್ರದುರ್ಗ:ಮುರುಘಾ ಮಠದಲ್ಲಿ 47 ಫೋಟೋಗಳ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಮಠದ ಮಾಜಿ ಆಡಳಿತಾಧಿಕಾರಿ ಎಸ್.ಕೆ. ಬಸವರಾಜನ್ ಅವರನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಮಠದ ಫೋಟೋ ಕಳ್ಳತನಕ್ಕೆ ಪ್ರಚೋದನೆ ನೀಡಿದ ಆರೋಪದ ಮೇಲೆ ವಿಚಾರಣೆ ನಡೆಯುತ್ತಿದೆ.

ಚಿತ್ರದುರ್ಗ ಗ್ರಾಮಾಂತರ ಠಾಣೆ ಪೊಲೀಸರಿಂದ ಬಸವರಾಜನ್ ವಿಚಾರಣೆ ನಡೆಯುತ್ತಿದೆ. ಮುರುಘಾ ಮಠದಲ್ಲಿನ ಫೋಟೋ ಕಳ್ಳತನ ಪ್ರಕರಣ ಸಂಬಂಧ ಆಡಿಯೋ ಬಗ್ಗೆ ವಿರಕ್ತ ಮಠದ ಬಸವಪ್ರಭು ಶ್ರೀಗಳು ಚಿತ್ರದುರ್ಗ ಗ್ರಾಮಾಂತರ ಪೊಲೀಸ್​​ ಠಾಣೆಯಲ್ಲಿ ಬುಧವಾರ ದೂರು ನೀಡಿದ್ದರು. ಫೋಟೋ ಕಳ್ಳತನದ ಬಗ್ಗೆ ವೈರಲ್​ ಆದ ಆಡಿಯೋವೊಂದರ ಬಗ್ಗೆ ದೂರಿನಲ್ಲಿ ತಿಳಿಸಿದ್ದರು.

ಕೆಲ ದಿನಗಳ ಹಿಂದೆ ಮುರುಘಾ ಮಠದಲ್ಲಿ ನಡೆದ ಫೋಟೊ ಕಳ್ಳತನ ಪ್ರಕರಣ ಸಂಬಂಧ ಈಗಾಗಲೇ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಹೊಸಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯ ಮೋಹನ ಮೂರ್ತಿ ಅಲಿಯಾಸ್ ಸ್ವಾಮಿ, ಎಸ್.ಜೆ.ಎಂ. ಪಾಲಿಟೆಕ್ನಿಕ್ ಕಾಲೇಜು ಉಪನ್ಯಾಸಕ ಶಿವಾನಂದ ಸ್ವಾಮಿ ಅವರ ಬಂಧನವಾಗಿದೆ.

ಮತ್ತೊಂದೆಡೆ ಆಡಿಯೋ ಒಂದು ವೈರಲ್​ ಆಗಿರುವ ಕುರಿತು ಗ್ರಾಮಾಂತರ ಪೊಲೀಸ್​​ ಠಾಣೆಯಲ್ಲಿ ಸಲ್ಲಿಕೆಯಾಗಿರುವ ದೂರಿನ ಸಂಬಂಧ ಕೆಲವರ ವಿಚಾರಣೆ ನಡೆಸಲಾಗುತ್ತಿದೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: ಮುರುಘಾ ಮಠದಲ್ಲಿ ಫೋಟೋ ಕಳವು ಮಾಡಿದ್ದ ಆರೋಪಿಗಳ ಬಂಧನ

Last Updated : Nov 10, 2022, 12:44 PM IST

ABOUT THE AUTHOR

...view details