ಚಿತ್ರದುರ್ಗ:ಮಾಸಿಕ ಪ್ರಗತಿ ಪರಿಶೀಲನ ಸಭೆಯಲ್ಲಿ ಸಾಕಷ್ಟು ಚರ್ಚೆ ನಡೆಸಿ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಮೂಲಕ ಜಿಲ್ಲೆಯ ಅಭಿವೃದ್ಧಿಗೆ ಪ್ರತಿಯೊಬ್ಬರು ಶ್ರಮಿಸುತ್ತಾರೆ. ಆದರೆ, ಚಿತ್ರದುರ್ಗದಲ್ಲಿ ನಡೆದ ಮಾಸಿಕ ಪ್ರಗತಿ ಪರಿಶೀಲನಾ ಸಭೆ ಇದಕ್ಕೆ ತದ್ವಿರುದ್ಧ.
ಅಧಿಕಾರಿಗಳು ಇಲ್ಲ, ಜಿಪಂ ಸದಸ್ಯರು ಇಲ್ಲದ ಮೇಲೆ ಕೆಡಿಪಿ ಸಭೆ ಯಾರಿಗಾಗಿ!? - ಚಿತ್ರದುರ್ಗದಲ್ಲಿ ಮಾಸಿಕ ಪ್ರಗತಿ ಪರಿಶೀಲನ ಸಭೆ
ಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸಾಕಷ್ಟು ಚರ್ಚೆ ನಡೆಸಿ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಮೂಲಕ ಜಿಲ್ಲೆಯ ಅಭಿವೃದ್ಧಿಗೆ ಪ್ರತಿಯೊಬ್ಬರು ಶ್ರಮಿಸುತ್ತಾರೆ. ಆದರೆ, ಚಿತ್ರದುರ್ಗದಲ್ಲಿ ನಡೆದ ಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧಿಕಾರಿಗಳು ಹಾಗೂ ಸದಸ್ಯರು ಗೈರಾಗಿರೋದು ಎದ್ದು ಕಾಣುತಿತ್ತು.
![ಅಧಿಕಾರಿಗಳು ಇಲ್ಲ, ಜಿಪಂ ಸದಸ್ಯರು ಇಲ್ಲದ ಮೇಲೆ ಕೆಡಿಪಿ ಸಭೆ ಯಾರಿಗಾಗಿ!? Monthly Progress Review Meeting](https://etvbharatimages.akamaized.net/etvbharat/prod-images/768-512-6037411-thumbnail-3x2-net.jpg)
ಮಾಸಿಕ ಪ್ರಗತಿ ಪರಿಶೀಲನ ಸಭೆ:ಅಧಿಕಾರಿಗಳು ಹಾಗೂ ಸದಸ್ಯರು ಗೈರು
ಮಾಸಿಕ ಪ್ರಗತಿ ಪರಿಶೀಲನ ಸಭೆ:ಅಧಿಕಾರಿಗಳು ಹಾಗೂ ಸದಸ್ಯರು ಗೈರು
ತಮ್ಮ ಕ್ಷೇತ್ರದ ಸಮಸ್ಯೆಗಳನ್ನು ಬಗೆ ಹರಿಸಿಕೊಳ್ಳಬೇಕಾಗಿದ್ದ ಅಧಿಕಾರಿಗಳು ಹಾಗೂ ಸದಸ್ಯರು ಗೈರಾಗಿರೋದು ಸಭೆಯಲ್ಲಿ ಎದ್ದು ಕಾಣುತಿತ್ತು. ಪ್ರತಿ ಸಭೆಯಲ್ಲಿ ಅಧಿಕಾರಿಗಳಿಂದ ತುಂಬಿರುತ್ತಿದ್ದ ಚೇರ್ಗಳು ಇಂದಿನ ಸಭೆಯಲ್ಲಿ ಖಾಲಿ ಖಾಲಿ ಹೊಡೆಯುತಿದ್ದವು. ಸಭೆಗೆ ಬಾರದ ಅಧಿಕಾರಿಗಳನ್ನು ಗುರಿಯಾಗಿಸಿ ಕ್ರಮಕ್ಕೆ ಮುಂದಾಗಬೇಕೆಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಜಿಪಂ ಸಿಇಒ ಸತ್ಯಭಾಮ ಅವರು ತಾಕೀತು ಮಾಡಿದರು.
ಜನ ಸಾಮಾನ್ಯರ ಧ್ವನಿಯಾಗಿ ತಮ್ಮ ಕ್ಷೇತ್ರದ ಸಮಸ್ಯೆಗಳನ್ನು ಬಗೆ ಹರಿಸಿಕೊಳ್ಳಬೇಕಾಗಿದ್ದ ಜಿಪಂ ಸದಸ್ಯರು ಕೂಡ ಸಭೆಯತ್ತ ಸುಳಿಯದೆ ಇರುವುದು ನಾಚಿಕೆಗೇಡಿನ ಸಂಗತಿ.