ಕರ್ನಾಟಕ

karnataka

By

Published : Apr 29, 2020, 5:07 PM IST

ETV Bharat / state

ವಿವಿ ಸಾಗರದಿಂದ ನೀರು ಹರಿಸುವ ವಿಚಾರ: ಇಬ್ಬರು ಶಾಸಕರ ನಡುವೆ ಶೀತಲ ಸಮರ..!

ವಾಣಿ ವಿಲಾಸ ಸಾಗರದಿಂದ ವೇದಾವತಿ ನದಿಗೆ ಹರಿಯಲು ಬಿಟ್ಟಿದ್ದ ನೀರನ್ನು ಹಿರಿಯೂರು ಬಿಜೆಪಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಸ್ಥಗಿತಗೊಳಿಸಿದ್ದಾರೆ. ಈ ಮೂಲಕ ಇಬ್ಬರು ಶಾಸಕರ ಶೀತಲಸಮರ ಬಹಿರಂಗವಾಗಿದೆ ಎನ್ನಲಾಗಿದೆ.

MLA Poornima Sriniva
ಶಾಸಕಿ ಪೂರ್ಣಿಮಾ ಶ್ರೀನಿವಾಸ್

ಚಿತ್ರದುರ್ಗ:ವಾಣಿ ವಿಲಾಸ ಸಾಗರದ ನೀರಿನ ಸಲುವಾಗಿ ಇಬ್ಬರು ಶಾಸಕರ ನಡುವೆ ಇದೀಗ ಶೀತಲ ಸಮರ ಏರ್ಪಟ್ಟಿದೆ. ಚಳ್ಳಕೆರೆ ತಾಲೂಕಿನ ಕೆಲ ಗ್ರಾಮಗಳಿಗೆ ಕುಡಿಯುವ ನೀರಿನ ಸಲುವಾಗಿ ಈ ಹಿಂದೆ ವಿವಿ ಸಾಗರದಿಂದ ವೇದಾವತಿ ನದಿಗೆ 0.25 ಟಿಎಂಸಿ ನೀರನ್ನು ಜಲ ಸಂಪನ್ಮೂಲ ಸಚಿವ ರಮೇಶ್ ಜಾರಕಿ ಹೋಳಿ ನೀರು ಹರಿಸಲು ಚಾಲನೆ‌ ನೀಡಿದ್ದರು. ಆದರೀಗ ಅದೇ ಪಕ್ಷದ ಶಾಸಕಿ ನೀರನ್ನು ಸ್ಥಗಿತಗೊಳಿಸಿದ್ದಾರೆ ಎಂಬ ಆರೋಪ ವ್ಯಕ್ತವಾಗಿದೆ.

ನೀರು ಚಳ್ಳಕೆರೆಯ ಕೆಲ ಹಳ್ಳಿಗಳ ಬ್ಯಾರೇಜ್​ಗಳಿಗೆ ತಲುಪುವ ಮುನ್ನವೇ ಹಿರಿಯೂರು ಬಿಜೆಪಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ನೀರು ನಿಲ್ಲಿಸುವ ಮೂಲಕ, ಚಳ್ಳಕೆರೆ ಕೈ ಶಾಸಕ ರಘು ಮೂರ್ತಿಯವರ ಕೆಂಗ್ಗಣಿಗೆ ಗುರಿಯಾಗಿದ್ದಾರೆ ಎನ್ನಲಾಗಿದೆ. ಇದರಿಂದ ಚಳ್ಳಕೆರೆಗೆ‌ ನೀರು ಹರಿಸಲು ಶಾಸಕಿ ಪೂರ್ಣಿಮಾ ಶ್ರೀನಿವಾಸ್ ರವರ ಅನುಮತಿ ಪಡೆಯಬೇಕಾ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಮೂಡಿದೆ.

ವೇದಾವತಿ ನದಿಗೆ ಬಿಟ್ಟಿದ್ದ ನೀರನ್ನು ಸ್ಥಗಿತಗೊಳಿಸಿದ ಶಾಸಕಿ

ಈಗಾಗಲೇ ಹಿರಿಯೂರು ವಿವಿ ಸಾಗರ ಜಲಾಶಯದಿಂದ 0.25 ಟಿಎಂಸಿ ನೀರನ್ನು ವೇದಾವತಿ ನದಿಗೆ ಹರಿಸಲು ಸರ್ಕಾರ ಆದೇಶಿಸಿದ ಬೆನ್ನಲ್ಲೇ ಸಚಿವ ರಮೇಶ್ ಜಾರಕಿಹೋಳಿ ನೀರು ಹರಿಸಲು ಚಾಲನೆ ನೀಡಿದ್ದರು. ಆದ್ದರಿಂದ ಕಳೆದ ಐದು ದಿನಗಳಿಂದ ನದಿಗೆ ನೀರು ಹರಿಸಲಾಗಿತ್ತು.

ನೀರು ಹರಿಸಿದ ಬಳಿಕ ಬಂದ್ ಮಾಡಿರುವ ಮಾಹಿತಿ ತಿಳಿದ ಚಳ್ಳಕೆರೆ ಶಾಸಕ ರಘುಮೂರ್ತಿ ಸಂಬಂಧ ಪಟ್ಟ ಅಧಿಕಾರಿಗಳ ಬಳಿ ಮಾತನಾಡಿ ಮತ್ತೆ ನೀರು ಹರಿಸಿದ್ದರು. ಮತ್ತೆ ನೀರು ಹರಿಸಿರುವ ವಿಷಯ ತಿಳಿದ ಹಿರಿಯೂರು ಶಾಸಕಿ ಪೂರ್ಣಿಮಾ ರೈತ ಮುಖಂಡರೊಂದಿಗೆ ವಿವಿ ಸಾಗರದ ಬಳಿ ಧರಣಿ ನಡೆಸಿ ನೀರು ನಿಲ್ಲಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ವಿಷಯವೀಗ ಸಾರ್ವಜನಿಕ ವಲಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.

ABOUT THE AUTHOR

...view details