ಚಿತ್ರದುರ್ಗ:ಮಲಗಿದ್ದ ವೇಳೆ ಕತ್ತು ಕುಯ್ದು ಬಿಲ್ ಕಲೆಕ್ಟರ್ ಕೊಲೆ ಮಾಡಿದ್ದ ಪ್ರಕರಣಕ್ಕೆ ಈಗ ಟ್ವಿಸ್ಟ್ ಸಿಕ್ಕಿದೆ!
ಕೊಲೆಯಾದಎನ್.ಬಿ ಜಯಪ್ಪ(48) ಅವರನ್ನು ತನ್ನ ಅಪ್ರಾಪ್ತ ಮಗನೇ ಮಚ್ಚಿನಿಂದ ಕೊಚ್ಚಿ ಕೊಲೆಗೈದಿರುವುದು ಗೊತ್ತಾಗಿದೆ. 17 ವರ್ಷದ ಹುಡುಗ ಸರಿಯಾದ ವಯಸ್ಸಿಗೆ ಬರುವ ಮುನ್ನವೇ ಪ್ರೀತಿಯ ಬಲೆಗೆ ಬಿದ್ದಿದ್ದಾನೆ ಎಂದು ತಿಳಿದ ತಂದೆ ಆತನಿಗೆ ಬುದ್ಧಿ ಹೇಳಿದ್ದರಂತೆ. ಆದರೆ, ತಿಳಿ ಹೇಳಿದ್ದಕ್ಕೆ ಕೋಪಗೊಂಡ ಪಾಪಿ ಮಗ, ತಂದೆಯನ್ನೇ ಬರ್ಬರವಾಗಿ ಕೊಲೆ ಮಾಡಿದ್ದಾನೆ.