ಕರ್ನಾಟಕ

karnataka

By

Published : Nov 16, 2021, 4:45 PM IST

ETV Bharat / state

ಗೋಡೆ ಮೇಲೆ ''ನನ್ನ ಸಾವಿಗೆ ಪೊಲೀಸರೇ ಕಾರಣ'' ಎಂದು ಬರೆದು ವ್ಯಕ್ತಿ ನೇಣಿಗೆ ಶರಣು!

ಬೊಮ್ಮನಹಳ್ಳಿ ಗ್ರಾಮದ ನಿವಾಸಿ ವೆಂಕಟೇಶ್ ಗೋಡೆ ಮೇಲೆ ನನ್ನ ಸಾವಿಗೆ ಪೊಲೀಸರೇ ಕಾರಣ ಎಂದು ಬರೆದು ನೇಣಿಗೆ(Chitradurga suicide case) ಶರಣಾಗಿದ್ದಾನೆ.

chitradurga suicide case
ಚಿತ್ರದುರ್ಗ ಆತ್ಮಹತ್ಯೆ ಪ್ರಕರಣ

ಚಿತ್ರದುರ್ಗ: ವ್ಯಕ್ತಿಯೋರ್ವ ಗೋಡೆ ಮೇಲೆ ''ನನ್ನ ಸಾವಿಗೆ ಪೊಲೀಸರೇ ಕಾರಣ'' ಎಂದು ಬರೆದು ಲುಂಗಿಯಿಂದ ನೇಣು ಬಿಗಿದುಕೊಂಡು ನೇಣು ಹಾಕಿಕೊಂಡಿರುವ ಘಟನೆ (Chitradurga suicide case) ಜಿಲ್ಲೆಯ ಹಿರಿಯೂರು ನಗರದ ಕೆಎಸ್​ಆರ್​ಟಿಸಿ ಬಸ್ ನಿಲ್ದಾಣ ಮುಂಭಾಗದ ಕಟ್ಟಡದಲ್ಲಿ ನಡೆದಿದೆ.

ಚಿತ್ರದುರ್ಗ ಆತ್ಮಹತ್ಯೆ ಪ್ರಕರಣ

ಮೃತ ವ್ಯಕ್ತಿಯನ್ನು ಚಿತ್ರದುರ್ಗ ತಾಲೂಕಿನ ಬೊಮ್ಮನಹಳ್ಳಿ ಗ್ರಾಮದ ನಿವಾಸಿ ವೆಂಕಟೇಶ್ (30) ಎಂದು ಗುರುತಿಸಲಾಗಿದೆ. ಮೃತ ವೆಂಕಟೇಶ್ ಗ್ಯಾರೇಜ್​ನಲ್ಲಿ ಕೆಲಸ ಮಾಡಿಕೊಂಡಿದ್ದನು. ಆತ ಕುಡಿತದ ದುಶ್ಚಟಕ್ಕೆ ಒಳಗಾಗಿ ರಾತ್ರಿ ವೇಳೆ ಬಸ್ ನಿಲ್ದಾಣ ಸೇರಿದಂತೆ ಎಲ್ಲೆಂದರಲ್ಲಿ ತಂಗುತ್ತಿದ್ದ. ಕಳೆದ ಎರಡು ತಿಂಗಳಿನಿಂದ ಮನೆಗೆ ಬಂದಿರಲಿಲ್ಲ. ಆತನಿಗೆ ಮದುವೆ ಮಾಡಲು ಹುಡುಗಿ ನೋಡುತ್ತಿದ್ದೆವು ಎಂದು ಮೃತನ ಸಂಬಂಧಿಕರು ತಿಳಿಸಿದ್ದಾರೆ.

ಇದನ್ನೂ ಓದಿ:401 ನಕ್ಷತ್ರ ಆಮೆ ಅಕ್ರಮ ಸಾಗಾಟ : ತಮಿಳುನಾಡು ಮೂಲದ ಆರೋಪಿ ಅರೆಸ್ಟ್

ವೆಂಕಟೇಶ​ನ ಮೃತ ದೇಹವನ್ನು ಹಿರಿಯೂರು ಸಾರ್ವಜನಿಕ ಆಸ್ಪತ್ರೆಯ ಶವಾಗಾರದಲ್ಲಿ ಇಡಲಾಗಿದೆ. ಹಿರಿಯೂರು ನಗರದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details