ಚಿತ್ರದುರ್ಗ:ಕೋಟೆನಾಡಿಗೆ ಹೊಸದಾಗಿ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣ ನಿರ್ಮಾಣಕ್ಕೆ ಈಗಾಗಲೇ ಹೊಸ ಜಾಗ ನಿಗದಿಪಡಿಸಲಾಗಿದೆ. ಈ ಕಟ್ಟಡ ನಿರ್ಮಿಸಲು ರಾಷ್ಟ್ರೀಯ ಹೆದ್ದಾರಿ 4 ರ ಬಳಿಯ ಬೆಟ್ಟವನ್ನು ಸಮತಟ್ಟು ಮಾಡುವ ಕಾರ್ಯ ವೇಗವಾಗಿ ಸಾಗುತ್ತಿದೆ.
ಕಳೆದ ವಾರದ ಹಿಂದಷ್ಟೇ ಬೆಟ್ಟದಲ್ಲಿ ಬೃಹತ್ ಬಂಡೆ ಕಾಣಿಸಿಕೊಂಡಿದೆ. ಈ ಬಂಡೆ ತೆರವುಗೊಳಿಸಲು 5 ಕೋಟಿ ರೂ ಹಣವನ್ನು ಜಿಲ್ಲಾಡಳಿತ ಖರ್ಚು ಮಾಡಬೇಕು ಎಂದು ತಂತ್ರಜ್ಞರು ಸಲಹೆ ನೀಡಿದ್ದಾರೆ. ಇದರ ಬೆನ್ನಲ್ಲೇ ಗುಡ್ಡದ ಕೋಟಿ ಕೋಟಿ ಬೆಲೆ ಬಾಳುವ ಮಣ್ಣು ಲೂಟಿಯಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ.
ಕೋಟೆನಾಡಿಗೆ ಹೊಸದಾಗಿ ಆಡಳಿತ ಕಚೇರಿ ಸಂಕೀರ್ಣ ನಿರ್ಮಾಣ, ಜಿಲ್ಲೆಯ ಜನತೆಯ ಕೆಲಸ ಕಾರ್ಯಗಳಿಗೆ ಎಲ್ಲ ಕಚೇರಿಗಳು ಒಂದೇ ಸ್ಥಳದಲ್ಲಿ ಇರಬೇಕು ಎಂಬ ಉದ್ದೇಶಕ್ಕಾಗಿ ಸರ್ಕಾರ ಜಿಲ್ಲಾಧಿಕಾರಿ ಕಚೇರಿ ನಿರ್ಮಾಣಕ್ಕೆ ಕಳೆದ ಒಂದೂವರೆ ವರ್ಷದ ಹಿಂದೆ ಹಸಿರು ನಿಶಾನೆ ತೋರಿದೆ.
ಚಿತ್ರದುರ್ಗ ನಗರದ ಹೊರವಲಯದ ರಾಷ್ಟ್ರೀಯ ಹೆದ್ದಾರಿ 4ರ ಬಳಿ ಕುಂಚಿಗನಾಳ್ ಬೆಟ್ಟ ನೆಲಸಮ ನೆಲಸಮಗೊಳಿಸಿ 40 ಎಕರೆ ಪ್ರದೇಶದಲ್ಲಿ ಜಿಲ್ಲಾಡಳಿತ ಕಟ್ಟಡ ಮಾಡಲು ಸರ್ಕಾರ ಒಪ್ಪಿಗೆ ಸೂಚಿಸಿತ್ತು. ಒಟ್ಟು 45 ಕೋಟಿ ರೂ.ಗಳ ವೆಚ್ಚದಲ್ಲಿ ಕಟ್ಟಡ ನಿರ್ಮಾಣಕ್ಕೆ ಈಗಾಗಲೇ ಅಂಕಿತ ಕೂಡ ಹಾಕಲಾಗಿದೆ.
ಕಳೆದ 6 ತಿಂಗಳ ಹಿಂದೆ ಮುಂಗಡವಾಗಿ ಕಟ್ಟಡ ನಿರ್ಮಾಣಕ್ಕೆ 25 ಕೋಟಿ ರೂ. ಹಣ ಬಿಡುಗಡೆಗಾಗಿ, ಕಳೆದ ಒಂದೂವರೆ ತಿಂಗಳಿಂದ ಬೆಟ್ಟ ಸಮತಟ್ಟು ಮಾಡುವ ಕಾರ್ಯ ಭರದಿಂದ ಸಾಗಿದೆ. ಬೆಟ್ಟ ಸಮತಟ್ಟು ಮಾಡಿ, ಬೆಟ್ಟದ ಮಣ್ಣನ್ನು ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕೆ ಬಳಸಿಕೊಳ್ಳಲು, ಪಿಎನ್ಸಿ ಕಂಪನಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಪರವಾನಿಗೆ ಪಡೆದುಕೊಂಡಿದೆ. ಇತ್ತ ಹೆದ್ದಾರಿ ನಿರ್ಮಾಣಕ್ಕೆ ಮಣ್ಣು ಕೂಡ ಸರಬರಾಜು ಮಾಡುತ್ತಿದೆ. ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ಪಿಎನ್ಸಿ ಕಂಪನಿ, ಮುಂಗಡವಾಗಿ 2 ಕೋಟಿ ರೂ. ಮಾತ್ರ ಪಾವತಿಸಿ, ನಾಲ್ಕೈದು ಕೋಟಿಯಷ್ಟು ಬೆಲೆಬಾಳುವ ಮಣ್ಣು ಸರಬರಾಜು ಮಾಡುತ್ತಿದೆ ಎಂದು ಚಿತ್ರದುರ್ಗ ನಗರ ಶಾಸಕ ತಿಪ್ಪಾರೆಡ್ಡಿ ಗಂಭೀರ ಆರೋಪ ಮಾಡುತ್ತಿದ್ದಾರೆ.
ಓದಿ:ಪ್ರಜಾಪ್ರಭುತ್ವದ ಹಕ್ಕು ಚಲಾಯಿಸಿ ಜೀವನ ಯಾತ್ರೆ ಮುಗಿಸಿದ ವೃದ್ಧೆ
ಇತ್ತ ಜಿಲ್ಲಾ ಗಣಿ ಮತ್ತು ಭೂವಿಜ್ಞಾನ ಇಲಾಖೆಗಳ ಅಧಿಕಾರಿಗಳ ನಿರ್ಲಕ್ಷ್ಯ ಹಾಗೂ ಮಣ್ಣು ಸರಬರಾಜು ಮಾಡುವ ಕಂಪನಿಯಿಂದ ಹಣ ಪಾವತಿಸಿಕೊಳ್ಳದಿರುವುದು ಕೋಟಿ ಕೋಟಿ ಸಂಪತ್ತು ಪುಕ್ಕಟೆಯಾಗಿ ಲೂಟಿಗೆ ಕಾರಣ ಎಂದು ಶಾಸಕ ತಿಪ್ಪಾರೆಡ್ಡಿ ಆರೋಪಿಸಿದ್ದಾರೆ.
2 ಕೋಟಿ ಪಾವತಿಸಿ 5 ಕೋಟಿ ಬೆಟ್ಟದ ಸಂಪತ್ತು ಲೂಟಿ