ಕರ್ನಾಟಕ

karnataka

By

Published : Sep 12, 2020, 2:41 PM IST

ETV Bharat / state

ಇಂದು ಕೋಟೆನಾಡಲ್ಲಿ ಸರಳವಾಗಿ ಹಿಂದೂ ಮಹಾಗಣಪತಿಯ ನಿಮಜ್ಜನ

ಕೊರೊನಾ ಎಫೆಕ್ಟ್​ನಿಂದ ರಾಜ್ಯದಲ್ಲಿ ಪ್ರಸಿದ್ಧಿ ಪಡೆದಿರುವ ಹಿಂದೂ ಮಹಾಗಣಪತಿಯ ನಿಮಜ್ಜನ ಕಾರ್ಯಕ್ರಮವನ್ನು ಅತ್ಯಂತ ಸರಳವಾಗಿ ನೆರವೇರಿಸಲು ನಿರ್ಧರಿಸಲಾಗಿದೆ..

dd
ಸರಳವಾಗಿ ಹಿಂದೂ ಮಹಾಗಣಪತಿಯ ನಿಮಜ್ಜನ

ಚಿತ್ರದುರ್ಗ: ಪ್ರತಿವರ್ಷ ಸಾಕಷ್ಟು ವೈಭವದಿಂದ ನಡೆಯುತ್ತಿದ್ದ ಹಿಂದೂ ಮಹಾಗಣಪತಿ ನಿಮಜ್ಜನ ಕಾರ್ಯಕ್ರಮ ಈ ಬಾರಿ ಕೊರೊನಾ ಎಫೆಕ್ಟ್​ನಿಂದ ಸರಳವಾಗಿ ಶೋಭಯಾತ್ರೆ ಇಲ್ಲದೆ ನಡೆಯಲಿದೆ.

ಸರಳವಾಗಿ ಹಿಂದೂ ಮಹಾಗಣಪತಿಯ ನಿಮಜ್ಜನ

ಶೋಭಾ ಯಾತ್ರೆ ಬದಲಾಗಿ 100 ಜನರ ಸಾಂಕೇತಿಕವಾಗಿ ಯಾತ್ರೆಯಲ್ಲಿರ್ತಾರೆ. ‌ಜನ ಸೇರದಂತೆ ಪೊಲೀಸ್​ ಇಲಾಖೆ ನಿಗಾ ವಹಸಿದೆ. ಗಣಪತಿ ಮೆರವಣಿಗೆ ಸಾಗುವ ಮಾರ್ಗದಲ್ಲಿ ಪೋಲ್ಸ್​ಗಳನ್ನು ಕಟ್ಟಲಾಗಿದ್ದು, ಮುಂಜಾಗ್ರತ ಕ್ರಮವಾಗಿ ಎಸ್​ಪಿ ಜಿ.ರಾಧಿಕಾ ನೇತೃತ್ವದಲ್ಲಿ ಪರೇಡ್ ನಡೆಸಲಾಗಿದೆ.

ಈಗಾಗಲೇ ಜಿಲ್ಲಾಡಳಿತ ಸರಳ ಶೋಭಾ ಯಾತ್ರೆಯಲ್ಲಿ ನಾದ ಸ್ವರಕ್ಕೆ ಮಾತ್ರ ಅವಕಾಶ ಕಲ್ಪಿಸಿದ್ದು, ಯಾವುದೇ ಡೊಳ್ಳು ಕುಣಿತ, ಸ್ಪೀಕರ್​ಗಳಿಗೆ ಅನುಮತಿ ನೀಡಿಲ್ಲ. ಯಾತ್ರೆಯಲ್ಲಿ ಕಾರ್ಯಕರ್ತರು ಹಾಗೂ ಸಮಿತಿಯವರು ಪಾಲ್ಗೊಳ್ಳಲು ಮಾತ್ರ ಅವಕಾಶವಿದೆ. ಮಧ್ಯಾಹ್ನ 3 ಗಂಟೆಗೆ ನಿಮಜ್ಜನ ಯಾತ್ರೆ ಆರಂಭವಾಗಲಿದೆ.

ABOUT THE AUTHOR

...view details