ಕರ್ನಾಟಕ

karnataka

ETV Bharat / state

ಗಟ್ಟಿದ್ವನಿ ಇದ್ದವನು ಒಂಟಿ ಆಗ್ತಾನೆ, ನನ್ನ ಸ್ನೇಹಿತರು ನನ್ನನ್ನು ಒಬ್ಬಂಟಿ ಮಾಡಿದ್ರು: ಹಳ್ಳಿಹಕ್ಕಿ ಬೇಸರ - ವಿಧಾನ ಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ಹೇಳಿಕೆ

ನಾನು ಒಂಟಿ ಅಲ್ಲ. ರಾಜ್ಯದ ಜನ ನನ್ನ ಜೊತೆಗಿದ್ದಾರೆ. ಆದರೆ ನಾನು ವಾಸ್ತವದ ನೆಲೆಗಟ್ಟಿನಲ್ಲಿ ಮಾತನಾಡುತ್ತಾ ಬಂದವನು ಎಂದು ವಿಧಾನ ಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ಹೇಳಿದರು‌‌.

H Vishwanath statement on cabinet expansion
H Vishwanath statement on cabinet expansion

By

Published : Jan 23, 2021, 3:33 PM IST

Updated : Jan 23, 2021, 4:57 PM IST

ಚಿತ್ರದುರ್ಗ: ಯಾರಿಗೆ ಗಟ್ಟಿ ದ್ವನಿ ಇರುತ್ತೋ ಅವನು ಒಂಟಿ ಆಗುತ್ತಾನೆ. ನನ್ನ ಸ್ನೇಹಿತರು ನನ್ನನ್ನು ಒಂಟಿ ಮಾಡಿ ಹೋದರು. ಆದರೆ, ನಾನು ಒಂಟಿಯಲ್ಲ ಎಂದು ವಿಧಾನ ಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ಹೇಳಿದರು‌‌.

ಧಾನ ಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ಹೇಳಿಕೆ

ನಗರದಲ್ಲಿ ಮಾತನಾಡಿದ ಅವರು, ನಾನು ಒಂಟಿ ಅಲ್ಲ. ರಾಜ್ಯದ ಜನ ನನ್ನ ಜೊತೆಗಿದ್ದಾರೆ. ನನ್ನ 17 ಜನ ಸ್ನೇಹಿತರು ಬಿಡಿ, ಮಂತ್ರಿ ಆಗುತ್ತಾರೆ. ಅಷ್ಟಕ್ಕೆ ಸಿಮೀತ. ಆದರೆ ನಾನು ವಾಸ್ತವದ ನೆಲೆಗಟ್ಟಿನಲ್ಲಿ ಮಾತನಾಡುತ್ತ ಬಂದವನು ಎಂದರು.

ಮಂತ್ರಿಗಿರಿ ಸಿಗುತ್ತೋ ಬಿಡುತ್ತೋ ರಾಜ್ಯದ ಸಾಕ್ಷಿಪ್ರಜ್ಞೆಯಿಂದ ನಾನು ಸಹ 17 ಜನರ ಟೀಮ್. ನಾನೇ ಟೀಮ್ ಮುನ್ನೆಡೆಸಿದ್ದೇನೆ ಎಂದರು‌.

ನನ್ನ ಜತೆ ಮಾತಾಡಿದರೆ ಸಿಎಂ ಬಿಎಸ್​ವೈ ಏನಾದರು ತಿಳಿದುಕೊಂಡರೆ? ಗಟ್ಟಿಧ್ವನಿ ರಾಜ್ಯದಲ್ಲಿ ಪ್ರತಿಧ್ವನಿಸುತ್ತದೆ, ಹೇಡಿ ಧ್ವನಿ ಅಲ್ಲ ಎಂದು ಹೇಳಿದರು.

Last Updated : Jan 23, 2021, 4:57 PM IST

For All Latest Updates

TAGGED:

ABOUT THE AUTHOR

...view details