ಕರ್ನಾಟಕ

karnataka

ETV Bharat / state

ಚಿತ್ರದುರ್ಗ: ಮೊದಲ ಬಾರಿಗೆ ರೈಲಿನ ಮೂಲಕ ಕೋಲ್ಕತ್ತಾಗೆ ಈರುಳ್ಳಿ ಸಾಗಣೆ - ರೈಲಿನ ಮೂಲಕ ಕೊಲ್ಕತ್ತಾಗೆ ಈರುಳ್ಳಿ ಸಾಗಾಟ

ಈ ಮೊದಲೆಲ್ಲ ಚಿತ್ರದುರ್ಗ ಜಿಲ್ಲೆಯಲ್ಲಿ ಹೆಚ್ಚಿನ ಹಣ ನೀಡಿ ಈರುಳ್ಳಿ ಬೆಳೆಗಾರರು ಕೋಲ್ಕತ್ತಾಗೆ ಸಾಗಿಸುತ್ತಿದ್ದರು. ಆದರೆ, ರೈಲ್ವೆ ಇಲಾಖೆಗೆ ಮನವಿ ಮಾಡಿಕೊಂಡು ಮೊದಲ ಬಾರಿಗೆ ರೈಲಿನ ಮೂಲಕ ಕೋಲ್ಕತ್ತಾಗೆ ಸಾಗಿಸಿದ್ದಾರೆ.

Grower exported 20 tan onions to Kolkata by rail
ಮೊದಲ ಬಾರಿಗೆ ರೈಲಿನ ಮೂಲಕ ಕೊಲ್ಕತ್ತಾಗೆ ಈರುಳ್ಳಿ ಸಾಗಾಟ

By

Published : Sep 30, 2021, 2:30 PM IST

ಚಿತ್ರದುರ್ಗ:ಕಳೆದ ಮೂರ್ನಾಲ್ಕು ವರ್ಷಗಳಿಂದ ಬೆಳೆಗಾರರು ಲಾರಿ ಮಾಲೀಕರಿಗೆ ಹೆಚ್ಚಿನ ಹಣ ಕೊಟ್ಟು ಕೋಲ್ಕತ್ತಾಗೆ ಈರುಳ್ಳಿ ರವಾಸಿಸುತ್ತಿದ್ದರು. ಆದರೆ, ಇದೇ ಮೊದಲ ಬಾರಿಗೆ ರೈಲಿನ ಮೂಲಕ 20 ಟನ್​​​ಗೂ ಅಧಿಕ ಈರುಳ್ಳಿ ಸಾಗಿಸಿದ್ದಾರೆ.

ಮೊದಲ ಬಾರಿಗೆ ರೈಲಿನ ಮೂಲಕ ಕೋಲ್ಕತ್ತಾಗೆ ಈರುಳ್ಳಿ ಸಾಗಣೆ

ಮೊದಲೆಲ್ಲ ದುಬಾರಿ ಬಾಡಿಗೆ ತೆತ್ತು ಕೋಲ್ಕತ್ತಾಗೆ ಈರುಳ್ಳಿ ಚೀಲಗಳನ್ನು ಬೆಳೆಗಾರರು ಸಾಗಿಸುತ್ತಿದ್ದರು. ಆದರೆ, ಮೊದಲ ಬಾರಿಗೆ ರೈಲ್ವೆ ಇಲಾಖೆ ಅಧಿಕಾರಿಗಳಿಗೆ ಮನವಿ ಮಾಡಿಕೊಂಡು 1 ಕೆಜಿ ಈರುಳ್ಳಿಗೆ ಒಂದು ರೂಪಾಯಿ ಅರವತ್ತು ಪೈಸೆ ಕೊಟ್ಟು ಚಳ್ಳಕೆರೆ ತಾಲೂಕಿನ ಬೇಡರೆಡ್ಡಿಹಳ್ಳಿ ಗ್ರಾಮದ ನಿಲ್ದಾಣದಿಂದ ಕೋಲ್ಕತ್ತಾ ಮಾರುಕಟ್ಟೆಗೆ ಕಡಿಮೆ ವೆಚ್ಚದಲ್ಲಿ ಸುಮಾರು 20 ಬೋಗಿಗಳಲ್ಲಿ ಈರುಳ್ಳಿ ಸಾಗಣೆ ಮಾಡಿದ್ದಾರೆ.

ನಮ್ಮ ಮನವಿಗೆ ಸ್ಪಂದಿಸಿದ ಇಲಾಖೆ

ಪ್ರತಿ ಬಾರಿ ರೈತರಿಂದ ಖರೀದಿ ಮಾಡಿದ ಈರುಳ್ಳಿಯನ್ನು ಲಾರಿಗಳ ಮೂಲಕ ಸಾಗಿಸಲಾಗುತ್ತಿತ್ತು. ಲಾರಿಗಳ ಬಾಡಿಗೆ ದುಬಾರಿ ಆಗುತ್ತಿತ್ತು. ಹಾಗಾಗಿ ರೈಲ್ವೆ ಇಲಾಖೆಗೆ ಮನವಿ ಮಾಡಲಾಗಿತ್ತು. ನಮ್ಮ ಮನವಿಗೆ ಸ್ಪಂದಿಸಿ ರೈಲು ಬಿಟ್ಟಿರುವುದು ನಮಗೆ ಅನುಕೂಲವಾಗಿದೆ. ರೈಲಿನಲ್ಲಿ ಒಮ್ಮೆಲೆ 20 ಟನ್​​ಗೂ ​ಅಧಿಕ ತೂಕದ ಈರುಳ್ಳಿ ಚೀಲಗಳನ್ನು ತೆಗೆದುಕೊಂಡು ಹೋಗುತ್ತಿದ್ದೇವೆ. ಅಷ್ಟೇ ಅಲ್ಲದೆ ನಮಗೆ ಹಮಾಲಿ ಹಣ ಕೂಡ ಕಡಿಮೆ ವೆಚ್ಚದಲ್ಲಿ ಆಗುತ್ತಿದೆ ಎಂದು ಬಂಜಗೆರೆ ರೈತ ಚಂದ್ರಣ್ಣ ಹೇಳಿದರು.

ABOUT THE AUTHOR

...view details