ಕರ್ನಾಟಕ

karnataka

ETV Bharat / state

ಚಿತ್ರದುರ್ಗದ ಗಡಿ ಭಾಗದಲ್ಲಿ ಕಾಲಿಟ್ಟ ಉಗ್ರ ಮಿಡತೆಗಳು: ರೈತರಲ್ಲಿ ಆತಂಕ

ನೆರೆಯ ಆಂಧ್ರ ಪ್ರದೇಶದ ಅನಂತಪುರ ಜಿಲ್ಲೆಯ ರಾಯದುರ್ಗ ಗ್ರಾಮದಲ್ಲಿ ಮಿಡತೆಗಳ‌ ಹಾವಳಿ ಶುರುವಾಗಿದೆ. ಇದು ಚಿತ್ರದುರ್ಗ ಗಡಿಗೆ ಹೊಂದಿಕೊಂಡಿದ್ದು, ರಾಜ್ಯದ ಗಡಿ ಭಾಗದಿಂದ ರಾಯದುರ್ಗ ಗ್ರಾಮ 10 ಕಿ. ಮೀ. ದೂರದಲ್ಲಿದೆ. ರಾಯದುರ್ಗ ಗ್ರಾಮಕ್ಕೆ ದಾಳಿಯಿಟ್ಟ ಮಿಡತೆಗಳು ಮನೆಮುಂದಿನ ಎಕ್ಕೆ ಗಿಡದ ಎಲೆಗಳನ್ನು ನಾಶ ಮಾಡಿವೆ.

By

Published : May 30, 2020, 12:12 AM IST

Grasshoppers crossing the border farmers in anxiety
ಕೋಟೆನಾಡಿನ ಗಡಿ ಭಾಗಕ್ಕೂ ಕಾಲಿಟ್ಟ ಮಿಡತೆಗಳು: ಆತಂಕದಲ್ಲಿ ರೈತರು

ಚಿತ್ರದುರ್ಗ:ಉತ್ತರ ಭಾರತದ ರಾಜ್ಯಗಳಲ್ಲಿ ದಾಳಿ ಹಿಟ್ಟಿದ್ದ ಉಗ್ರ ಮಿಡತೆಗಳು ಹಿಂಡು ಚಿತ್ರದುರ್ಗದ ಗಡಿ ಭಾಗದಲ್ಲಿ ಕಾಣಿಸಿಕೊಂಡಿವೆ.

ಚಿತ್ರದುರ್ಗದ ಗಡಿ ಭಾಗದಲ್ಲಿ ಮಿಡತೆಗಳ ದಾಳಿಗೆ ತುತ್ತಾದ ಎಕ್ಕೆ ಗಿಡ

ನೆರೆಯ ಆಂಧ್ರ ಪ್ರದೇಶದ ಅನಂತಪುರ ಜಿಲ್ಲೆಯ ರಾಯದುರ್ಗ ಗ್ರಾಮದಲ್ಲಿ ಮಿಡತೆಗಳ‌ ಹಾವಳಿ ಶುರುವಾಗಿದೆ. ಇದು ಚಿತ್ರದುರ್ಗ ಗಡಿಗೆ ಹೊಂದಿಕೊಂಡಿದೆ. ರಾಜ್ಯದ ಗಡಿ ಭಾಗದಿಂದ ರಾಯದುರ್ಗ ಗ್ರಾಮ 10 ಕಿ. ಮೀ. ದೂರದಲ್ಲಿದೆ. ರಾಯದುರ್ಗ ಗ್ರಾಮಕ್ಕೆ ದಾಳಿಯಿಟ್ಟ ಮಿಡತೆಗಳು ಮನೆಮುಂದಿನ ಎಕ್ಕೆ ಗಿಡದ ಎಲೆಗಳನ್ನು ನಾಶ ಮಾಡಿವೆ.

ಉಗ್ರ ಸ್ವರೂಪದ ಮಿಡತೆಗಳು ಎಲ್ಲಿ ತಮ್ಮ ಬೆಳೆಗಳ ಮೇಲೆ ದಾಳಿ ಮಾಡಲಿವೆಯೋ ಎಂಬ ಆತಂಕ ಗಡಿಭಾಗದ ರೈತರಲ್ಲಿ ಉಂಟಾಗಿದೆ.

ABOUT THE AUTHOR

...view details