ಚಿತ್ರದುರ್ಗ:ದೇಶದಾದ್ಯಂತ ಲಾಕ್ಡೌನ್ ಹಿನ್ನೆಲೆ ಮುರುಘಾ ಮಠದ ವತಿಯಿಂದ ನೂರಾರು ಜನರಿಗೆ ಆಹಾರಧಾನ್ಯ ವಿತರಿಸಲಾಯಿತು.
ಮುರುಘಾ ಮಠದ ವತಿಯಿಂದ ವತಿಯಿಂದ ಮತ್ತೆ 630 ಜನರಿಗೆ ಆಹಾರ ಸಾಮಗ್ರಿ ಕಿಟ್ ವಿತರಣೆ - food kit
ದೇಶದಾದ್ಯಂತ ಲಾಕ್ಡೌನ್ ಹಿನ್ನೆಲೆ ಮುರುಘಾ ಮಠದ ವತಿಯಿಂದ ಒಟ್ಟು 630 ಜನ ಬಡವರಿಗೆ ರಾಗಿ, ಬೇಳೆ, ಗೋಧಿ, ಅಕ್ಕಿ ಇರುವ ಕಿಟ್ಗಳನ್ನು ವಿತರಿಸಲಾಯಿತು.
![ಮುರುಘಾ ಮಠದ ವತಿಯಿಂದ ವತಿಯಿಂದ ಮತ್ತೆ 630 ಜನರಿಗೆ ಆಹಾರ ಸಾಮಗ್ರಿ ಕಿಟ್ ವಿತರಣೆ food kit for 630 people from the Muruga Math](https://etvbharatimages.akamaized.net/etvbharat/prod-images/768-512-6738175-426-6738175-1586515131635.jpg)
ಮುರುಘಾ ಮಠದ ವತಿಯಿಂದ ವತಿಯಿಂದ ಮತ್ತೆ 630 ಜನರಿಗೆ ಆಹಾರದ ಕಿಟ್
ಭೋವಿ ಗುರುಪೀಠದ ಶ್ರೀ ಇಮ್ಮಡಿ ಸಿದ್ದರಾಮ ಸ್ವಾಮಿ ಹಾಗೂ ಮುರುಘಾ ಮಠದ ಪೀಠಾಧಿಪತಿ ಶ್ರೀ ಡಾ. ಶಿವಮೂರ್ತಿ ಮುರುಘಾ ಶರಣರು ಜಂಟಿಯಾಗಿ ಒಟ್ಟು 630 ಜನ ಬಡವರಿಗೆ ರಾಗಿ, ಬೇಳೆ, ಗೋಧಿ, ಅಕ್ಕಿ ಇರುವ ಕಿಟ್ಗಳನ್ನು ನೀಡಿದರು.
ಈಗಾಗಲೇ ಮುರುಘಾ ಮಠದ ವತಿಯಿಂದ ಹಕ್ಕಿಪಿಕ್ಕಿ ಜನಾಂಗದ ಜನರಿಗೆ ಎರಡು ಹೊತ್ತು ಆಹಾರ ಕಲ್ಪಿಸಲಾಗಿತ್ತು.