ಕರ್ನಾಟಕ

karnataka

ETV Bharat / state

ಈಟಿವಿ ಭಾರತ ಫಲಶೃತಿ: ಮಹಿಳೆಯನ್ನು ಮ್ಯಾನ್​ಹೋಲ್​ಗೆ ಇಳಿಸಿದ ಗುತ್ತಿಗೆದಾರನ ವಿರುದ್ಧ ಎಫ್ಐಆರ್​

ಮಹಿಳೆಯನ್ನು ಮ್ಯಾನ್ ಹೋಲ್ ಸ್ವಚ್ಛಗೊಳಿಸಲು ಇಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಗುತ್ತಿಗೆದಾರ ಅಶೋಕ್ ವಿರುದ್ಧ ಚಿತ್ರದುರ್ಗ ನಗರ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.

By

Published : Sep 9, 2019, 2:56 PM IST

ಈಟಿವಿ ಭಾರತ ಫಲಶೃತಿ

ಚಿತ್ರದುರ್ಗ: ಬರೀ ಗೈಯಲ್ಲೇ ಮ್ಯಾನ್ ಹೋಲ್ ಸ್ವಚ್ಛಗೊಳಿಸಲು ಮಹಿಳೆವೋರ್ವಳನ್ನು ಇಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಗುತ್ತಿಗೆದಾರ ಅಶೋಕ್ ವಿರುದ್ಧ ನಗರ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.

ಕಳೆದ ಶನಿವಾರ ನಡೆದಿದ್ದ ಈ ಅಮಾನವೀಯ ಘಟನೆ ಬಗ್ಗೆ 'ಈಟಿವಿ ಭಾರತ'ನಲ್ಲಿ ಘಟನೆ ವರದಿ ಪ್ರಕಟಿಸಲಾಗಿತ್ತು. ನಗರಸಭೆ ಪೌರಾಯುಕ್ತ ಚಂದ್ರಪ್ಪ ಖುದ್ದು ಚಿತ್ರದುರ್ಗ ಟೌನ್ ಪೊಲೀಸ್​ ಠಾಣೆಗೆ ಆಗಮಿಸಿ ಪ್ರಕರಣ ದಾಖಲಿಸಿದ್ದರು. ಹೀಗಾಗಿ ಇದು ಈಟಿವಿ ಭಾರತ ವರದಿಯ ಫಲಶೃತಿಯಾಗಿದೆ.

ಗುತ್ತಿಗೆದಾರನ ವಿರುದ್ಧ ಎಫ್ಐಆರ್​

ಹಿನ್ನೆಲೆ:

ಗುತ್ತಿಗೆದಾರ ಅಶೋಕ್ ಈ ಮಹಿಳೆಗೆ ಯಾವುದೇ ರೀತಿಯ ರಕ್ಷಣಾ ಕವಚ ನೀಡದೆ ಮ್ಯಾನ್​ಹೋಲ್​ಗೆ ಇಳಿಸಿದ್ದರು. ನಗರದ ಜೈನ್ ದೇವಾಲಯ ಮುಂಭಾಗದ ರಸ್ತೆಯಲ್ಲಿ, ಮಹಿಳೆಯನ್ನ ಮ್ಯಾನ್ ಹೋಲ್​ಗೆ ಇಳಿಸಿ ಸ್ವಚ್ಛಗೊಳಿಸುವಂತೆ ಕಾಂಟ್ರಾಕ್ಟರ್ ಹೇಳಿರುವುದನ್ನು ಸಾರ್ವಜನಿಕರು ಖಂಡಿಸಿದ್ದರು.

ರಕ್ಷಣಾ ಕವಚವಿಲ್ಲದೆ ಮಹಿಳೆಯನ್ನು ಮ್ಯಾನ್​ಹೋಲ್​ಗೆ ಇಳಿಸಿದ್ರು: ಚಿತ್ರದುರ್ಗದಲ್ಲಿ ಅಮಾನವೀಯ ಘಟನೆ

ಈ ಅಮಾನವೀಯ ಘಟನೆ ಕುರಿತು ವರದಿ ಪ್ರಕಟಿಸಿದಾಗ ಅಧಿಕಾರಿಗಳು ಎಚ್ಚೆತ್ತುಕೊಂಡು ಸೂಕ್ತ ಕ್ರಮ ಕೈಗೊಂಡಿದ್ದಾರೆ. ವರದಿಗೆ ಸ್ಪಂದಿಸಿರುವ ಅಧಿಕಾರಿಗಳಿಗೆ ಈಟಿವಿ ಭಾರತ ಕಡೆಯಿಂದ ಧನ್ಯವಾದ ತಿಳಿಸುತ್ತೇನೆ. ಹಾಗೆಯೇ ಇಂತಹ ಘಟನೆಗಳು ಜಿಲ್ಲೆಯಲ್ಲಿ ಮರುಕಳಿಸಿದಂತೆ ನೋಡಿಕೊಳ್ಳಬೇಕೆಂದು ಮನವಿ ಮಾಡುತ್ತೇನೆ.

ABOUT THE AUTHOR

...view details