ಕರ್ನಾಟಕ

karnataka

ETV Bharat / state

ಭದ್ರ ನಾಲೆ ಮಾರ್ಗ ಬದಲಾವಣೆ ಮಾಡದಂತೆ ಒತ್ತಾಯ... ಹೆದ್ದಾರಿಯಲ್ಲಿ ರೈತರ ಪ್ರತಿಭಟನೆ - kannada news, etv bharat, Farmers protest against change of bhadra nave line, ಚಿತ್ರದುರ್ಗ, ಭದ್ರನಾಲೆ ಮಾರ್ಗ ಬದಲಾವಣೆ ಮಾಡದಂತೆ ರೈತರ ಪ್ರತಿಭಟನೆ

ಭದ್ರನಾಲೆ ಮಾರ್ಗ ಬದಲಾವಣೆ ಮಾಡದಂತೆ ಚಿತ್ರದುರ್ಗ ರೈತರು ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಿ ಪ್ರತಿಭಟನೆ ನಡೆಸಿದರು.

ರೈತರ ಪ್ರತಿಭಟನೆ

By

Published : Jun 17, 2019, 9:20 PM IST

ಚಿತ್ರದುರ್ಗ:ಭದ್ರ ನಾಲೆ ಮಾರ್ಗ ಬದಲಾವಣೆ ಮಾಡದಂತೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಸಂಘಟನೆಯಿಂದ ರೈತರು ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಾಷ್ಟ್ರೀಯ ಹೆದ್ದಾರಿ ಬಂದ್​ ಮಾಡಿ ಪ್ರತಿಭಟನೆ ನಡೆಸಿದ ರೈತರು

ಚಿತ್ರದುರ್ಗ ತಾಲೂಕಿನ ಕಾತ್ರಾಳ್ ಕೆರೆ ಮಾರ್ಗವಾಗಿ ಜಗಳೂರಿಗೆ ಹೋಗುವ ಭದ್ರ ನಾಲೆಯ ಮಾರ್ಗ ಬದಲಾವಣೆಗೆ ಜಗಳೂರು ರೈತರ ಪಟ್ಟು ಹಿನ್ನೆಲೆ ಭದ್ರ ಕಾಲುವೆ ಮಾರ್ಗ ಬದಲಾವಣೆ ವಿರೋಧಿಸಿ ಚಿತ್ರದುರ್ಗ ರೈತರು ಪ್ರತಿಭಟನೆ ನಡೆಸಿದರು.

ಪ್ರತಿಭಟನೆಯಿಂದ ರಾಷ್ಟ್ರೀಯ ಹೆದ್ದಾರಿ ಸಂಚಾರ ಅಸ್ತವ್ಯಸ್ತವಾಗಿತ್ತು. ಮುಂಜಾಗ್ರತ ಕ್ರಮವಾಗಿ ಪ್ರತಿಭಟನೆಗೆ ಪೊಲೀಸ್​​ ಬಿಗಿ ಬಂದೋಬಸ್ತ್ ಮಾಡಲಾಗಿತ್ತು. ಪ್ರತಿಭಟನೆ ತೀವ್ರಗೊಂಡ ಬೆನ್ನಲ್ಲೇ ಶಾಸಕರುಗಳಾದ ತಿಪ್ಪಾರೆಡ್ಡಿ, ರಘುಮೂರ್ತಿ ಸ್ಥಳಕ್ಕೆ ಭೇಟಿ ನೀಡಿ ರೈತರನ್ನು ಮನವೊಲಿಸಿ ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

For All Latest Updates

TAGGED:

bhadra canal

ABOUT THE AUTHOR

...view details