ಕರ್ನಾಟಕ

karnataka

By

Published : Jul 28, 2022, 5:11 PM IST

ETV Bharat / state

ಪ್ರವೀಣ್ ಒಬ್ಬನೇ ಇದ್ದಾಗ ಹೇಡಿಗಳ ರೀತಿ ಹತ್ಯೆ ಮಾಡಿ ಓಡಿ ಹೋಗಿದ್ದಾರೆ: ಕೆ.ಎಸ್.ಈಶ್ವರಪ್ಪ

ರಾಜ್ಯದಲ್ಲಿ ಮತ್ತೊಂದು ಕೊಲೆ ಆಗಬಾರದು. ಈ ನಿಟ್ಟಿನಲ್ಲಿ ತುರ್ತಾಗಿ ಕಾನೂನು ರಚನೆ ಆಗಬೇಕು. ಪ್ರವೀಣ್ ನೆಟ್ಟಾರು ಕೊಲೆಗಾರರು ಯಾರೆಂದು ಪತ್ತೆ ಹಚ್ಚಬೇಕು. ಕೊಲೆ ಹಿಂದೆ ಯಾವ ರಾಷ್ಟ್ರದ್ರೋಹಿ ಸಂಘಟನೆ ಇದೆ ಎಂಬುವದನ್ನು ಪತ್ತೆ ಹಚ್ಚಬೇಕೆಂದು ಕೆ.ಎಸ್​.ಈಶ್ವರಪ್ಪ ಆಗ್ರಹಿಸಿದರು.

ex-minister-ks-eshwarappa-reaction-on-praveen-nettaru-murder-case
ಪ್ರವೀಣ್ ಒಬ್ಬನೇ ಇದ್ದಾಗ ಹೇಡಿಗಳ ರೀತಿ ಹತ್ಯೆ ಮಾಡಿ ಓಡಿ ಹೋಗಿದ್ದಾರೆ: ಕೆ.ಎಸ್.ಈಶ್ವರಪ್ಪ

ಚಿತ್ರದುರ್ಗ:ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣವು ಮುಸ್ಲಿಂ ಗೂಂಡಾಗಳಿಂದ ನಡೆದ ದುಷ್ಕೃತ್ಯವಾಗಿದೆ. ಮಾನಸಿಕ ಸ್ಥಿತಿಯನ್ನು ಅವರು ಬದಲಾವಣೆ ಮಾಡಿಕೊಂಡಿಲ್ಲ. ಪ್ರವೀಣ್ ಒಬ್ಬನೇ ಇದ್ದಾಗ ಹೇಡಿಗಳ ರೀತಿ ಹತ್ಯೆ ಮಾಡಿ ಓಡಿ ಹೋಗಿದ್ದಾರೆ ಎಂದು ಮಾಜಿ ಸಚಿವ‌ ಕೆ.ಎಸ್.ಈಶ್ವರಪ್ಪ ಆಕ್ರೋಶ ವ್ಯಕ್ತಪಡಿಸಿದರು.

ಚಿತ್ರದುರ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದೇ ರೀತಿ ಶಿವಮೊಗ್ಗದಲ್ಲಿ ಹರ್ಷನ ಹತ್ಯೆ ನಡೆದಿತ್ತು. ಮುಸ್ಲಿಂ ಸಮುದಾಯದ ಹಿರಿಯರು ಗುಂಡಾಗಳಿಗೆ ತಿಳಿ ಹೇಳಬೇಕು. ಇಡೀ ರಾಜ್ಯದ ಶಾಂತಿ, ವ್ಯವಸ್ಥೆ ಹಾಳು ಮಾಡುತ್ತಿದ್ದಾರೆ ಎಂದು ಹೇಳಿದರು.

ಬೆಳಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಭೇಟಿ ಮಾಡಿದ್ದೇನೆ‌. ಶಾಂತಿಪ್ರಿಯ ಕರ್ನಾಟಕ ರಾಜ್ಯದಲ್ಲಿ ಕಗ್ಗೊಲೆಗಳ ತಡೆಗೆ ಸೂಕ್ತ ಕ್ರಮದ ಬಗ್ಗೆ ಚಿಂತನೆ ನಡೆಯುತ್ತಿದೆ. ಕೊಲೆ ಮಾಡದಂತೆ ಯಾವ ರೀತಿ ಭಯ ಇರಬೇಕು ಎಂಬ ಬಗ್ಗೆ ಆಲೋಚಿಸಲಾಗುತ್ತಿದೆ. ಕೊಲೆಗೆ ಕೊಲೆಯೇ ಉತ್ತರ ಅಲ್ಲ, ಹಿಂದೂ ಸಮಾಜ ದುರ್ಬಲ ಅಂತನೂ ಅಲ್ಲ. ಹಿಂದೂ ಸಮಾಜದ ಶಕ್ತಿಯನ್ನು ದುರುಪಯೋಗ ಮಾಡಿಕೊಂಡು ನಿರಪರಾಧಿ ಹುಡುಗರ ಕೊಲೆ ಆಗುತ್ತಿದೆ ಎಂದರು.

ಪ್ರವೀಣ್ ಒಬ್ಬನೇ ಇದ್ದಾಗ ಹೇಡಿಗಳ ರೀತಿ ಹತ್ಯೆ ಮಾಡಿ ಓಡಿ ಹೋಗಿದ್ದಾರೆ: ಕೆ.ಎಸ್.ಈಶ್ವರಪ್ಪ

ಪ್ರವೀಣ್ ನೆಟ್ಟಾರು ಕೊಲೆ ಘಟನೆಯನ್ನು ಇಡೀ ರಾಜ್ಯ ದೇಶ ಗಮನಿಸುತ್ತಿದೆ. ಸಿಎಂ, ಪ್ರಧಾನಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಲ್ಲಿ ಪ್ರಾರ್ಥನೆ. ಇದೇ ಕೊಲೆ ಕೊನೆ ಆಗಬೇಕು. ರಾಜ್ಯದಲ್ಲಿ ಮತ್ತೊಂದು ಕೊಲೆ ಆಗಬಾರದು. ಈ ನಿಟ್ಟಿನಲ್ಲಿ ತುರ್ತಾಗಿ ಕಾನೂನು ರಚನೆ ಆಗಬೇಕು. ಕೊಲೆಗಾರರು ಯಾರೆಂದು ಪತ್ತೆ ಹಚ್ಚಬೇಕು. ಕೊಲೆ ಹಿಂದೆ ಯಾವ ರಾಷ್ಟ್ರದ್ರೋಹಿ ಸಂಘಟನೆ ಇದೆ ಎಂಬುವದನ್ನು ಪತ್ತೆ ಹಚ್ಚಬೇಕೆಂದು ಆಗ್ರಹಿಸಿದರು.

ಹಿಂದೂ ಸಮಾಜ ಹೊಡೆತ ಕೊಟ್ಟರೆ ರಕ್ತದೋಕಳಿ:ಪ್ರವೀಣ್ ಕೊಲೆಯ ಬಗ್ಗೆ ರಾಜ್ಯದ ಜನ, ಹಿಂದೂ ಸಮಾಜಕ್ಕೆ ಆಕ್ರೋಶವಿದೆ. ನಮ್ಮ ಕಾರ್ಯಕರ್ತರನ್ನು ಕಳೆದುಕೊಳ್ಳುತ್ತಿದ್ದೇವೆ. ಬಿಜೆಪಿ ಸರ್ಕಾರ ಇದ್ದಾಗ್ಯೂ ಕಾರ್ಯಕರ್ತರ ರಕ್ಷಣೆಯಲ್ಲಿ ಯಶಸ್ವಿ ಆಗಿಲ್ಲ. ಈ ಬಗ್ಗೆ ನಾಯಕರು, ರಾಜ್ಯಕ್ಕೆ ನೋವಿದೆ ಎಂದು ಈಶ್ವರಪ್ಪ ಹೇಳಿದರು.

ಕೆಲವರು ಬಿಜೆಪಿ ಪದಾಧಿಕಾರಿ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದಾರೆ. ರಕ್ತವನ್ನು ಬೆವರು ರೂಪದಲ್ಲಿ ಸುರಿಸಿ ಹಿರಿಯರು ಪಕ್ಷ ಕಟ್ಟಿದ್ದಾರೆ. ಪಕ್ಷದ ಮೇಲೆ ಆಕ್ರೋಶ ತೀರಿಸುವುದರಲ್ಲಿ ಅರ್ಥ ಇಲ್ಲ. ಮುಸ್ಲಿಂ ಗುಂಡಾಗಳಿಂದ ಕೊಲೆ ಹಿನ್ನೆಲೆ ಕೊಲೆಗಳಾಗದಂತೆ ಕ್ರಮಕ್ಕೆ ಹಿರಿಯರಿಂದ ಚಿಂತನೆ. ಸಿಟ್ಟಿನಲ್ಲಿ ರಾಜೀನಾಮೆ ಕೊಡುವುದು ತಪ್ಪಾಗುತ್ತದೆ.

ರಾಜ್ಯದಲ್ಲಿ ಹಿಂದೂ ಸಮಾಜ ಹೊಡೆತ ಕೊಟ್ಟರೆ ರಕ್ತದೋಕಳಿ ಹರಿಯುತ್ತದೆ. ಆದರೆ, ಹಿಂದೂ ಸಮಾಜ ಯಾವತ್ತೂ ಹಾಗೇ ಮಾಡಿಲ್ಲ. ಪ್ರಬುದ್ಧತೆ ಕೊರತೆ ಕಾರಣ ಕೆಲವರು ರಾಜೀನಾಮೆಯಿಂದ ಹಲವರು ಕೂಡ ಹಾಗೆ ಮಾಡುತ್ತಿದ್ದಾರೆ ಎಂದು ಅಭಿಪ್ರಾಯಪಟ್ಟರು.

ಭ್ರಷ್ಟೋತ್ಸವ ಎನ್ನುವುದು ಸರಿಯಲ್ಲ:ತಿಹಾರ್ ಜೈಲಿಗೆ ಹೋಗಿಬಂದವರು ಬಿಜೆಪಿಗೆ ಭ್ರಷ್ಟಾಚಾರ ಅಂತಾರೆ. ಜನೋತ್ಸವವನ್ನು ಭ್ರಷ್ಟೋತ್ಸವ ಅಂತಾ ಕರೆಯುತ್ತಿರುವುದು ಸರಿಯಲ್ಲ. ಬಿಜೆಪಿ ಸರ್ಕಾರದ ಸಚಿವರು ಭ್ರಷ್ಟಾಚಾರದಲ್ಲಿದ್ದರೆ ಹೇಳಿ?. ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಕಾಂಗ್ರೆಸ್ ಪಕ್ಷದ ಪ್ರಕಾರ ದೇವ-ದೇವಿಯರೇ?. ಇಡಿ ವಿಚಾರಣೆಗೆ ಸೋನಿಯಾ, ರಾಹುಲ್ ಕರೆಯಬಾರದೇ ಎಂದು ಕಿಡಿಕಾರಿದರು.

ಡಿ.ಕೆ.ಶಿವಕುಮಾರ ಇನ್ನೂ ಬೇಲ್​ನಲ್ಲಿದ್ದಾರೆ, ಯಾವಾಗ ಜೈಲಿಗೆ ಹೋಗುತ್ತಾರೊ ಗೊತ್ತಿಲ್ಲ. ಸಿದ್ಧರಾಮಯ್ಯ ಜಮೀರ್ ಅಹ್ಮದ್ ಅಂತ ಬ್ರೋಕರ್‌ನನ್ನು ಬಳಸಿಕೊಳ್ತಿದ್ದಾರೆ. ಡಿಕೆಶಿ, ಸಿದ್ಧರಾಮಯ್ಯ ಜಾತಿವಾದಿಗಳು, ಇಂಥವರಿಗೆ ರಾಜ್ಯದ ಜನ ಸಿಎಂ ಮಾಡುತ್ತಾರೆಯೇ ಎಂದು ಈಶ್ವರಪ್ಪ ತಿರುಗೇಟು ನೀಡಿದರು.

ಇದನ್ನೂ ಓದಿ:ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬಂದ್ಮೇಲೆ 66 ಕೋಮು ದಳ್ಳುರಿ ಕೇಸ್​: ಆರೋಪಿಗಳಿಗೆ ಶಿಕ್ಷೆ ಮಾತ್ರ ಶೂನ್ಯ!

ABOUT THE AUTHOR

...view details