ಚಿತ್ರದುರ್ಗ: ಬಿಜೆಪಿ ಸರ್ಕಾರ ಅನೈತಿಕ ಕೂಸು ಎಂದಾದರೆ ಅದಕ್ಕೆ ಅಮ್ಮ ಮತ್ತು ಅಪ್ಪ ಯಾರು ಎಂಬ ಪ್ರಶ್ನೆ ಉದ್ಬವಿಸುತ್ತದೆ. ಬಿಜೆಪಿ ಅಂತೂ ಅಪ್ಪ. ಹಾಗಾದ್ರೆ ಅಮ್ಮ ಯಾರು? ಎಂದು ಪಂಚಾಯತ್ ರಾಜ್ ಮತ್ತು ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರಪ್ಪ ಅವರು ಪ್ರತಿಪಕ್ಷ ಸಿದ್ದರಾಮಯ್ಯ ಅವರ ಹೇಳಿಕೆಗೆ ತಿರುಗೇಟು ನೀಡಿದರು.
ಬಿಜೆಪಿ ಸರ್ಕಾರ ಅನೈತಿಕ ಕೂಸು ಎಂದಾದರೆ ಅಮ್ಮ ಯಾರು?: ಸಚಿವ ಈಶ್ವರಪ್ಪ ಪ್ರಶ್ನೆ - ಪ್ರತಿಪಕ್ಷ ಸಿದ್ದರಾಮಯ್ಯಗೆ ತಿರುಗೇಟು
ಬಿಜೆಪಿ ಸರ್ಕಾರ ಅನೈತಿಕ ಕೂಸು ಎಂದಾದರೆ ಅದಕ್ಕೆ ಅಮ್ಮ ಮತ್ತು ಅಪ್ಪ ಯಾರು ಎಂಬುದು ಪ್ರಶ್ನೆ. ಬಿಜೆಪಿ ಅಂತೂ ಅಪ್ಪ. ಹಾಗಾದ್ರೆ ಅಮ್ಮ ಯಾರು? ಎಂದು ಪಂಚಾಯತ್ ರಾಜ್ ಮತ್ತು ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರಪ್ಪ ಅವರು ಪ್ರತಿಪಕ್ಷ ಸಿದ್ದರಾಮಯ್ಯ ಅವರ ಹೇಳಿಕೆಗೆ ತಿರುಗೇಟು ನೀಡಿದರು.
![ಬಿಜೆಪಿ ಸರ್ಕಾರ ಅನೈತಿಕ ಕೂಸು ಎಂದಾದರೆ ಅಮ್ಮ ಯಾರು?: ಸಚಿವ ಈಶ್ವರಪ್ಪ ಪ್ರಶ್ನೆ Eshwarappa reaction about siddaramaiah statement](https://etvbharatimages.akamaized.net/etvbharat/prod-images/768-512-6145376-thumbnail-3x2-ks.jpg)
ಬಿಜೆಪಿ ಸರ್ಕಾರ ಅನೈತಿಕ ಸಂಬಂಧದ ಕೂಸು ಎಂಬ ಹೇಳಿಕೆಗೆ ತಿರುಗೇಟು ನೀಡಿದರು. ಚಿತ್ರದುರ್ಗದ ಹೊಸದುರ್ಗ ತಾಲೂಕಿನ ಹಾಲುರಾಮೇಶ್ವರ ದೇಗುಲದ ಬಳಿ ಮಾತನಾಡಿದ ಅವರು, ಮೈತ್ರಿ ಸರ್ಕಾರದ ಆಡಳಿತದಿಂದ ಬೇಸತ್ತು ಶಾಸಕರು ಬಿಜೆಪಿಗೆ ಬಂದಿದ್ದಾರೆ. ಶಾಸಕರನ್ನು ಹದ್ದು ಬಸ್ತಿನಲ್ಲಿಟ್ಟುಕೊಂಡಿದ್ದರೆ ಅವರು ಯಾಕೆ ಬೀದಿಗೆ ಬರುತ್ತಿದ್ದರು ಎಂದು ಪ್ರಶ್ನಿಸಿದರು.
ಬೀದಿಗೆ ಬರಲು ಕಾಂಗ್ರೆಸ್ ನಾಯಕತ್ವದ ವೈಫಲ್ಯ ಕಾರಣ. ಇದನ್ನು ಸಿದ್ದರಾಮಯ್ಯ ಅವರು ಒಪ್ಪಿಕೊಳ್ಳಬೇಕೇ ಎಂದು ವಾಗ್ದಾಳಿ ನಡೆಸಿದರು. ದೇಶ-ದ್ರೋಹಿಗಳ ವಿರುದ್ಧ ನಮ್ಮ ಸರ್ಕಾರ ಕ್ರಮ ಕೈಗೊಂಡಿದ್ದು, ಕಾಂಗ್ರೆಸ್ ದೇಶ ದ್ರೋಹಿಗಳ ಬೆನ್ನಿಗೆ ನಿಲ್ಲುತ್ತಿದೆ. ಬಿ.ಎಲ್.ಸಂತೋಷ್ ಅವರು ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ. ಬೇಸರ ಆದವರು ಸಂತೋಷ್ ಅವರನ್ನು ಭೇಟಿಯಾಗಿದ್ದರೆ ತಪ್ಪೇನು ಎಂದು ಪ್ರಶ್ನಿಸಿದರು.