ಕರ್ನಾಟಕ

karnataka

ETV Bharat / state

ಕೋಟೆ ನಾಡಲ್ಲಿ 5,970 ಲೀಟರ್ ಬಿಯರ್ ಅನ್ನು ಮಣ್ಣಿಗೆ ಸುರಿದ ಅಧಿಕಾರಿಗಳು... ಕಾರಣ? - Chitradurga District Deputy Commissioner of Excise

ಜಿಲ್ಲಾ ಅಬಕಾರಿ ಉಪ ಆಯುಕ್ತರ ಆದೇಶ ಮೇರೆಗೆ ನಗರದ ಕೆಎಸ್‍ಬಿಸಿಎಲ್ (ಕರ್ನಾಟಕ ಪಾನೀಯ ನಿಗಮ) ಡಿಪೋ ನಿಗಮದ ಮಳಿಗೆಯಲ್ಲಿನ ಅವಧಿ ಮೀರಿದ 5,970 ಲೀಟರ್​ ಬಿಯರ್​ ದಸ್ತಾನನ್ನ ನಾಶ ಪಡಿಸಲಾಯಿತು.

Destroy 5,970 liters of beer in Chitradurga
ಚಿತ್ರದುರ್ಗದಲ್ಲಿ ಅವಧಿ ಮೀರಿದ 5,970 ಲೀಟರ್ ಬಿಯರ್ ದಾಸ್ತಾನು ನಾಶ

By

Published : Mar 5, 2020, 12:10 PM IST

ಚಿತ್ರದುರ್ಗ: ಜಿಲ್ಲಾ ಅಬಕಾರಿ ಉಪ ಆಯುಕ್ತರ ಆದೇಶ ಮೇರೆಗೆ ನಗರದ ಕೆಎಸ್‍ಬಿಸಿಎಲ್ (ಕರ್ನಾಟಕ ಪಾನೀಯ ನಿಗಮ) ಡಿಪೋ ನಿಗಮದ ಮಳಿಗೆಯಲ್ಲಿನ ಅವಧಿ ಮೀರಿದ 5,970 ಲೀಟರ್​ ಬಿಯರ್​ ದಸ್ತಾನನ್ನ ನಾಶ ಪಡಿಸಲಾಯಿತು.

ಕೆಎಸ್‍ಬಿಸಿಎಲ್ ಡಿಪೋ ನಿಗಮದ ಮಳಿಗೆಯಲ್ಲಿನ ಅವಧಿ ಮೀರಿದ ಒಟ್ಟು 686 ಪೆಟ್ಟಿಗೆಗಳಲ್ಲಿನ 5,970 ಲೀಟರ್ ಅಂದರೆ ಅಂದಾಜು12.40 ಲಕ್ಷ ರೂಪಾಯಿ ಮೌಲ್ಯದ ಬಿಯರ್ ದಾಸ್ತಾನನ್ನ ನಾಶಪಡಿಸಲಾಯಿತು. ಬಿಯರ್ ತಯಾರಾದ ಬಳಿಕ 6 ತಿಂಗಳ ಅವಧಿಯವರೆಗೆ ಬಳಸಲು ಅವಕಾಶವಿರುತ್ತದೆ. ಆದರೆ ಚಿತ್ರದುರ್ಗ ಕೆಎಸ್‍ಬಿಸಿಎಲ್ ನಿಗಮದ ಮಳಿಗೆಯಲ್ಲಿ ದಾಸ್ತಾನಿದ್ದ ಸುಮಾರು 5,970 ಲೀಟರ್​ ಬಿಯರ್ ಅವಧಿ ಮೀರಿದ್ದರಿಂದ ನಿಯಮಾನುಸಾರ ಇಲಾಖೆಯಿಂದ ನಾಶಪಡಿಸಲಾಗಿದೆ.

ಒಟ್ಟು 115 ಲೀಟರ್ ಬ್ಲಾಕ್ ಪರ್ಲ್ ಟ್ರಿಪಲ್ ಸೂಪರ್ ಸ್ಟ್ರಾಂಗ್ ಬಿಯರ್ ಹಾಗೂ 571 ಬಾಕ್ಸ್​ ಬೆಕ್ಸ್ ಐಸ್ ಬಿಯರ್ ನಾಶಪಡಿಸಲಾಗಿದೆ.

ABOUT THE AUTHOR

...view details