ಕರ್ನಾಟಕ

karnataka

ETV Bharat / state

ಏಂಜಲ್ಸ್ ಫಾಲ್ಸ್ ಏರುವ ಕನಸು ಕಂಡ 'ಕೋತಿರಾಜ'ಗೆ ಕೊರೊನಾ ತಡೆ! - Chitradurga Jyothiraj News

ವೆನುಜುವೆಲಾದ ಏಂಜೆಲ್ಸ್ ಫಾಲ್ಸ್ ಹತ್ತಬೇಕು ಎಂದು ರಾಜ್ಯ, ಹೊರ ರಾಜ್ಯದ ಬೃಹತ್ ಬಂಡೆಗಳು, ಬೆಟ್ಟ ಹಾಗೂ ಜೋಗ್ ಫಾಲ್ಸ್ ಏರಿ ತಾಲೀಮು ನಡೆಸುತ್ತಿದ್ದಾರೆ. ಈ ಮೊದಲೇ ಏಂಜೆಲ್ಸ್ ಫಾಲ್ಸ್ ಹತ್ತಲು ಸಿದ್ಧತೆ ಮಾಡಿಕೊಂಡ ಜ್ಯೋತಿರಾಜ್​ಗೆ, ಕೊರೊನಾ ವೈರಸ್ ಅಡ್ಡಿಪಡಿಸಿತ್ತು..

'ಕೋತಿರಾಜ'ನ ಕನಸಿಗೆ ಕೊರೊನಾ ಅಡ್ಡಿ
'ಕೋತಿರಾಜ'ನ ಕನಸಿಗೆ ಕೊರೊನಾ ಅಡ್ಡಿ

By

Published : Dec 7, 2020, 10:31 AM IST

ಚಿತ್ರದುರ್ಗ :ಕರ್ನಾಟಕದಲ್ಲಿರುವ ಬಂಡೆ, ಗೋಡೆ, ಬೆಟ್ಟಗಳನ್ನು ಸ್ಪೈಡರ್​ಮ್ಯಾನ್‌ನಂತೆ ಕಣ್ಣುಮಿಟುಕಿಸುವಷ್ಟರಲ್ಲಿ ಏರಬಲ್ಲ ಛಲಗಾರ ಜ್ಯೋತಿರಾಜ್ ಅಲಿಯಾಸ್ ಕೋತಿರಾಜ್. ಈತ ನಿತ್ಯವೂ ದೊಡ್ಡ ದೊಡ್ಡ ಬಂಡೆಗಳನ್ನು ಏರುವ ಜೊತೆಗೆ ಕಠಿಣ ಪರಿಶ್ರಮದಿಂದ ತಾಲೀಮು ಮಾಡ್ತಿದ್ದಾನೆ.

ಇನ್ನು ಅಮೆರಿಕಾದ ಪ್ರಸಿದ್ಧ ಏಂಜಲ್ಸ್ ಫಾಲ್ಸ್ ಏರುವ ಕನಸು ಕಂಡ ಈತನಿಗೆ ಕೆಲ ಅಡೆತಡೆಗಳು ಬಂದಿವೆ. ಅಲ್ಲದೆ ಕೊರೊನಾ ವಕ್ಕರಿಸಿದ ದಿನಗಳಿಂದ ಜ್ಯೋತಿರಾಜನಿಗೆ ಅಮೆರಿಕಾಗೆ ಹೋಗಲು ವೀಸಾ ಸಿಗುತ್ತಿಲ್ಲ. ಪೂರ್ವ ಸಿದ್ಧತೆ ನಡೆಸಲು ಪ್ರೋತ್ಸಾಹಕರು ಸಿಗುತ್ತಿಲ್ಲ ಎಂದು ಈಟಿವಿ ಭಾರತ ಮುಖಾಂತರ ಅಳಲು ತೋಡಿಕೊಂಡಿದ್ದಾರೆ.

'ಕೋತಿರಾಜ'ನ ಕನಸಿಗೆ ಕೊರೊನಾ ಅಡ್ಡಿ..

ವೆನುಜುವೆಲಾದ ಏಂಜೆಲ್ಸ್ ಫಾಲ್ಸ್ ಹತ್ತಬೇಕು ಎಂದು ರಾಜ್ಯ, ಹೊರ ರಾಜ್ಯದ ಬೃಹತ್ ಬಂಡೆಗಳು, ಬೆಟ್ಟ ಹಾಗೂ ಜೋಗ್ ಫಾಲ್ಸ್ ಏರಿ ತಾಲೀಮು ನಡೆಸುತ್ತಿದ್ದಾರೆ. ಈ ಮೊದಲೇ ಏಂಜೆಲ್ಸ್ ಫಾಲ್ಸ್ ಹತ್ತಲು ಸಿದ್ಧತೆ ಮಾಡಿಕೊಂಡ ಜ್ಯೋತಿರಾಜ್​ಗೆ, ಕೊರೊನಾ ವೈರಸ್ ಅಡ್ಡಿಪಡಿಸಿತ್ತು.

ಹೀಗಾಗಿ, ಅಮೆರಿಕಾಗೆ ತೆರಳಲು ಸರ್ಕಾರ ಕೋತಿರಾಜ್​ಗೆ ವೀಸಾ ಹಾಗೂ ಅಗತ್ಯ ನೆರವು ಕೊಡಬೇಕಾಗಿದೆ. ಮುಂಬರುವ ಯುಗಾದಿ ಹಬ್ಬದೊಳಗಾಗಿ ಅಮೆರಿಕಾದ ಏಂಜೆಲ್ಸ್ ಫಾಲ್ಸ್ ಏರಿ ಸಾಹಸ ಮೆರೆದು ರಾಜ್ಯ ಹಾಗೂ ದೇಶದ ಹಿರಿಮೆ ಹೆಚ್ಚಿಸುವ ಕನಸು ಕಂಡಿದ್ದಾನೆ.

ತನ್ನೊಂದಿಗಿನ ಸಾಹಸ ಕಲೆ ಮರೆಯಾಗಬಾರದು ಎಂದು ಕೋತಿರಾಜ 15 ಯುವಕರ ಪಡೆ ಕಟ್ಟಿಕೊಂಡಿದ್ದಾರೆ‌. ಬಡಮಕ್ಕಳಿಗೆ ಓದಿನ ಜೊತೆಗೆ ಬಂಡೆ, ಗೋಡೆ ಏರುವ ತರಬೇತಿಯನ್ನ ಸ್ವಂತ ಖರ್ಚಿನಲ್ಲಿ ನೀಡುತ್ತಿದ್ದಾರೆ.

ಈತನ ಬಳಿ ತರಬೇತಿ ಪಡೆದ ಯುವಕರು ಈಗಾಗಲೇ ವಿವಿಧ ಗೇಮ್‌ಗಳಲ್ಲಿ ಭಾಗವಹಿಸಿ, ಚಿನ್ನದ ಪದಕ ಪಡೆದುಕೊಂಡಿದ್ದಾರಂತೆ. ಮುಂಬರುವ ದಿನಗಳಲ್ಲಿ ತರಬೇತಿ ನೀಡಲು ಕ್ರೀಡಾವಸತಿ ನಿಲಯ ಸ್ಥಾಪನೆ ಮಾಡಬೇಕು. ಯುವಕರಿಗೆ ತರಬೇತಿ ನೀಡಬೇಕು ಎಂದು ಕನಸು ಕಂಡಿದ್ದಾರೆ.

ಇನ್ನು ಪ್ರತಿ ಭಾನುವಾರ ದುರ್ಗದ ಕೋಟೆಯ ಬಂಡೆಗಳನ್ನ ಏರಿ ಜನರಿಗೆ ಸಾಹಸ ಪ್ರದರ್ಶನ ಮಾಡುತ್ತಾರೆ. ಬಳಿಕ ಪ್ರವಾಸಿಗರು ನೀಡುವ ಹಣದಿಂದ ತರಬೇತಿಗಾಗಿ ಖರ್ಚು ನಿರ್ವಹಣೆ ಮಾಡುತ್ತಿದ್ದಾರೆ.

ಇವರ ಕಾರ್ಯಕ್ಕೆ ಕೆಲವು ವ್ಯಕ್ತಿಗಳು ಬೆನ್ನೆಲುಬಾಗಿ ನಿಂತಿದ್ದಾರೆ. ಬರುವ ದಿನಗಳಲ್ಲಿ ನನ್ನಂತೆ ಈ ಯುವಕರು ಸಾಧನೆ ಮಾಡುತ್ತಾರೆ ಎಂದು ಕೋತಿರಾಜ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಕನ್ನಡಿಗರ ಆಶೀರ್ವಾದ ನನ್ನ ಮೇಲೆ ಇರುವರಿಗೂ ಜಗತ್ತಿನ ಯಾವುದೇ ಬಂಡೆ ಏರಲು ನಾನು ಸಿದ್ಧ ಎಂದು ಕೋತಿರಾಜ್ ಹೇಳಿಕೊಂಡಿದ್ದಾರೆ.

ABOUT THE AUTHOR

...view details