ಕರ್ನಾಟಕ

karnataka

ETV Bharat / state

ಸಿದ್ದರಾಮಯ್ಯ ಪ್ರತಿಪಕ್ಷ ನಾಯಕರಾಗಿರಲು ಅನರ್ಹ: ಸಚಿವ ಜಗದೀಶ್ ಶೆಟ್ಟರ್ - Congress criticized the government

ಮುಖ್ಯಮಂತ್ರಿ ಬಿ.ಎಸ್​​.ಯಡಿಯೂರಪ್ಪ ಅವರ ನೇತೃತ್ವದಲ್ಲಿ ಕೊರೊನಾ ವೈರಸ್ ತಡೆಗಟ್ಟಲು ಶ್ರಮಿಸುತ್ತಿರುವುದನ್ನು ಸಹಿಸಿಕೊಳ್ಳಲು ಸಾಧ್ಯವಾಗದೆ ಒಂದಿಲ್ಲೊಂದು ಟೀಕೆಯನ್ನು ಪ್ರತಿಪಕ್ಷ ಮಾಡುತ್ತಿದೆ ಎಂದು ಜಗದೀಶ್​​​ ಶೆಟ್ಟರ್​​ ಹೇಳಿದರು.

Congress criticized the government
ಸಚಿವ ಜಗದೀಶ್ ಶೆಟ್ಟರ್

By

Published : May 13, 2020, 4:39 PM IST

ಚಿತ್ರದುರ್ಗ: ಪ್ರಧಾನಿ ಮೋದಿ ಅವರು ₹ 20 ಲಕ್ಷ ಕೋಟಿ ಪ್ಯಾಕೇಜ್ ಘೋಷಿಸಿದ ನಿರ್ಧಾರವನ್ನು ಮಾಜಿ ಸಿಎಂ ಸಿದ್ದರಾಮಯ್ಯ ಟೀಕಿಸಿದ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಚಿವ ಶೆಟ್ಟರ್, ಬಹುಶಃ ಅವರು ಪ್ರತಿಪಕ್ಷದಲ್ಲಿರಲು ಯೋಗ್ಯರಲ್ಲ ಎಂದು ವಾಗ್ದಾಳಿ ನಡೆಸಿದರು.

ನಗರದ ಖಾಸಗಿ ಹೋಟೆಲ್​​​​ನಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಒಬ್ಬ ಪರಿಣತರಂತೆ ವರ್ತಿಸುತ್ತಿದ್ದಾರೆ ಎಂದು ಹೇಳಿದರು.

ಕೊರೊನಾ ವೈರಸ್ ಹರಡುತ್ತಿರುವುದು ತಬ್ಲಿಘಿಗಳಿಂದ ಮಾತ್ರ ಎಂಬುದಾಗಿ ಕೋಮುವಾದಿ ಸಂಘ ಪರಿವಾರದವರು ಹಬ್ಬಿಸುತ್ತಿದ್ದಾರೆ ಎಂದಿರುವ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಶೇ. 99ರಷ್ಟು ಸೋಂಕು ತಬ್ಲಿಘಿಗಳಿಂದ ಬಂದಿದೆ. ಆದರೆ, ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್​ ಅವರು ವೋಟ್ ಬ್ಯಾಂಕ್ ರಕ್ಷಣೆಗೆ ಈ ರೀತಿ ಟೀಕಿಸುತ್ತಿದ್ದಾರೆ ಎಂದರು.

ರಸ್ತೆಯಲ್ಲಿ ಹೋಗುವವರನ್ನು ಕೇಳಿದರೆ ತಬ್ಲಿಘಿಗಳಿಂದ ಸೋಂಕು ಬಂದಿದೆ ಎನ್ನುತ್ತಾರೆ. ಇಷ್ಟಾದರೂ ಸಿದ್ದರಾಮಯ್ಯ ಅವರಿಗೆ ಅರ್ಥ ಆಗಲಿಲ್ಲ. ಅವರು ಹಾಕಿಕೊಂಡಿರುವ ಕೋಮುವಾದದ ಪರದೆ ತೆಗೆಯಬೇಕು ಎಂದು ಕಿಡಿ ಕಾರಿದರು.

ABOUT THE AUTHOR

...view details