ಕರ್ನಾಟಕ

karnataka

2ನೇ ಹಂತದ ಪರಿಹಾರ ಧನ ಬರಲ್ಲ ಎನ್ನಲು ಹೆಚ್‌ಡಿಕೆ ಏನು ದೇಶದ ಪ್ರಧಾನಿನಾ.. ಬಿಎಸ್​ವೈ ಕಿಡಿ

By

Published : Oct 6, 2019, 7:31 PM IST

ಎರಡನೇ ಹಂತದ ಪರಿಹಾರ ಧನ ಬರಲ್ಲ ಎಂದ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರ ಹೇಳಿಕೆಗೆ ಸಿಎಂ ಯಡಿಯೂರಪ್ಪ ಕಿಡಿಕಾರಿದ್ದಾರೆ‌.

ಕುಮಾರಸ್ವಾಮಿ ವಿರುದ್ಧ ಬಿಎಸ್​ವೈ ಗರಂ

ಚಿತ್ರದುರ್ಗ: ಎರಡನೇ ಹಂತದ ಪರಿಹಾರ ಧನ ಬರಲ್ಲ ಎಂದ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರ ಹೇಳಿಕೆಗೆ ಸಿಎಂ ಯಡಿಯೂರಪ್ಪ ಕಿಡಿಕಾರಿದ್ದಾರೆ‌. ಕುಮಾರಸ್ವಾಮಿ ಏನು ದೇಶದ ಪ್ರಧಾನಿಯೇ ಎಂದು ಪ್ರಶ್ನಿಸಿದ್ದಾರೆ.

ಕುಮಾರಸ್ವಾಮಿ ವಿರುದ್ಧ ಬಿಎಸ್​ವೈ ಗರಂ..

ಅತಿವೃಷ್ಟಿಯಿಂದ ಜನರ ಬದುಕು ಮೂರಬಟ್ಟೆಯಾಗಿದೆ. ಎರಡನೇ ಹಂತದ ಪರಿಹಾರ ಧನ ಬರಲ್ಲ ಎನ್ನಲು ಕುಮಾರಸ್ವಾಮಿ ಏನೂ ಈ ದೇಶದ ಪ್ರಧಾನಿ ನಾ ಎಂದು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಪ್ರಶ್ನಿಸಿದರು. ಚಿತ್ರದುರ್ಗದ ಶ್ರೀಮುರುಘಾಮಠಕ್ಕೆ ತೆರಳುವ ಮುನ್ನ ಪ್ರತಿಕ್ರಿಯಿಸಿದ ಅವರು, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಬೇಜವಾಬ್ದಾರಿ ತನದಿಂದ ಮಾತನಾಡಬಾರದು. ಅವರೊಬ್ಬರು ಮಾಜಿ ಮುಖ್ಯಮಂತ್ರಿ. ಈ ರೀತಿ ಮಾತನಾಡಿದ್ರೆ ಬೆಲೆ ಇರಲ್ಲ. ಎರಡನೇ ಹಂತದ ಪರಿಹಾರ ಧನ ನೀಡಲು ಕೇಂದ್ರ ಸರ್ಕಾರ ತೀರ್ಮಾನ ಮಾಡುತ್ತದೆಯೇ ಹೊರೆತು ಕುಮಾರಸ್ವಾಮಿಯವರಲ್ಲ ಎಂದು ಮಾಜಿ ಮುಖ್ಯಮಂತ್ರಿ ವಿರುದ್ಧ ಬಿಎಸ್​ವೈ ಆಕ್ರೋಶ ಹೊರಹಾಕಿದರು.

ಇನ್ನು, ನೆರೆ ಸಂತ್ರಸ್ತರ ನಿಧಿ ಬಗ್ಗೆ ಪ್ರತಿಕ್ರಿಯಿಸಿದ ಅವರು, ಕೇಂದ್ರ ಸರ್ಕಾರದಿಂದ 1200 ಕೋಟಿ ಮೊದಲನೆ ಕಂತು ನೆರೆ ಪರಿಹಾರ ಬಂದಿದ್ದು, ಎರಡನೇ ಹಂತದ ಪರಿಹರ ಧನ ನವೆಂಬರ್, ಡಿಸೆಂಬರ್ ತಿಂಗಳಲ್ಲಿ ಬರುತ್ತದೆ. ಅ ಹಣದಿಂದ ರೈತರ ಬೆಳೆ ಪರಿಹಾರ ನೀಡುತ್ತೇವೆ. ಸಂತ್ರಸ್ತರಿಗೆ ಬೇಕಾಗುವ ಸೌಲಭ್ಯವನ್ನು ನಮ್ಮ ಸರ್ಕಾರದಿಂದ ನೀಡುತ್ತೇವೆ ಎಂದರು.

ABOUT THE AUTHOR

...view details