ಕರ್ನಾಟಕ

karnataka

By

Published : Sep 26, 2020, 7:22 PM IST

ETV Bharat / state

ರಸ್ತೆ ವಿಸ್ತರಣೆ :ಕೆಲ ಪ್ರಭಾವಿಗಳ ಕಟ್ಟಡ ಬಿಟ್ಟು ಉಳಿದವರ ಕಟ್ಟಡ ತೆರವು ಆರೋಪ

ಚಿತ್ರದುರ್ಗ ನಗರದಲ್ಲಿ ನಡೆಯುತ್ತಿರುವ ಕಿರಿದಾದ ರಸ್ತೆಗಳ ಅಗಲೀಕರಣ ವೇಳೆ ಕೆಲ ಪ್ರಭಾವಿಗಳ ಕಟ್ಟಡಗಳನ್ನು ಒಡೆಯದೇ ಉಳಿದವರ ಕಟ್ಟಡಗಳನ್ನು ತೆರವುಗೊಳಿಸಲಾಗ್ತಿದೆ ಎಂಬ ಆರೋಪ ಕೇಳಿ ಬಂದಿದೆ.

chitradurga city road widening alligations
ರಸ್ತೆ ಅಗಲೀಕರಣ

ಚಿತ್ರದುರ್ಗ: ನಗರದ ಮುಖ್ಯ ರಸ್ತೆ ಅಗಲೀಕರಣ ವೇಳೆ ತಾರತಮ್ಯ ಆರೋಪ ಕೇಳಿ ಬಂದಿದ್ದು, ನಗರಸಭೆ ಸದಸ್ಯ ದೀಪಕ್ ನೇತೃತ್ವದಲ್ಲಿ ಸ್ಥಳೀಯರು ಪ್ರತಿಭಟನೆ ನಡೆಸಿದರು.

ಪ್ರಭಾವಿಗಳ ಮನೆಗಳನ್ನ ಬಿಟ್ಟು ಉಳಿದವರ ಮನೆಗಳ ತೆರವು ಆರೋಪ

ನಗರದ ಹೃದಯ ಭಾಗದಲ್ಲಿ ಹಾದು ಹೋಗಿರುವ ಕಿರಿದಾಗಿದ್ದ ರಸ್ತೆಗಳ ಅಗಲೀಕರಣಕ್ಕೆ ಈಗಾಗಲೇ ಜಿಲ್ಲಾಡಳಿತ ಮುಂದಾಗಿದೆ. ನಗರದ ಚಳ್ಳಕೆರೆ ಗೇಟ್ ನಿಂದ ಆರಂಭವಾಗಿರುವ ರಸ್ತೆ ಅಗಲೀಕರಣ ಕಾಮಗಾರಿ ಇದೀಗ ಪ್ರವಾಸಿ ಮಂದಿರ ತನಕ ತಲುಪಿದೆ.

ಆದರೆ, ರಸ್ತೆ ಅಗಲೀಕರಣ ವೇಳೆ ಕೆಲ ಪ್ರಭಾವಿಗಳಿಗೆ ಸೇರಿದ ಕಟ್ಟಡಗಳನ್ನು ಒಡೆದು ಹಾಕದೆ ಹಾಗೇ ಬಿಟ್ಟು, ಉಳಿದವರ ಅಂದರೆ ಬಡವರ ಕಟ್ಟಡಗಳನ್ನು ತೆರವುಗೊಳಿಸುತ್ತಿದ್ದಾರೆ ಎಂದು ಆರೋಪಿಸಿ ಚಿತ್ರದುರ್ಗ ನಗರದ ಕೆಳಗೋಟೆ ಬಡಾವಣೆ ನಿವಾಸಿಗಳು ಪ್ರತಿಭಟನೆ ನಡೆಸಿದ್ದಾರೆ.

ABOUT THE AUTHOR

...view details