ಕರ್ನಾಟಕ

karnataka

By

Published : Nov 29, 2020, 11:45 AM IST

ETV Bharat / state

ಸಂಪುಟ ಪುನಾರಚನೆ ಎರಡು -ಮೂರು ದಿನಗಳಲ್ಲಿ ಆಗುವ ವಿಶ್ವಾಸವಿದೆ: ಸಿಎಂ ಬಿಎಸ್​ವೈ

ಸಂಪುಟ ಪುನಾರಚನೆ ಎರಡು ಮೂರು ದಿನಗಳಲ್ಲಿ ಆಗುವ ವಿಶ್ವಾಸವಿದೆ ಎಂದು ಚಿತ್ರದುರ್ಗದಲ್ಲಿ ಸಿಎಂ ಬಿ.ಎಸ್. ಯಡಿಯೂರಪ್ಪ ಹೇಳಿಕೆ ನೀಡಿದ್ದಾರೆ.

cabinet expansion will held within two or three days said bsy
ಸಿಎಂ ಬಿಎಸ್​ವೈ

ಚಿತ್ರದುರ್ಗ:ಸಂಪುಟ ಪುನಾರಚನೆ ಎರಡು ಮೂರು ದಿನಗಳಲ್ಲಿ ಆಗುವ ವಿಶ್ವಾಸವಿದ್ದು, ಸಾಧ್ಯವಾದ್ರೆ ಹೈಕಮಾಂಡ್ ಜೊತೆ ಚರ್ಚಿಸುತ್ತೇನೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಸಂಪುಟ ಪುನಾರಚನೆ ಬಗ್ಗೆ‌ ಮೂಡಿದ್ದ ಗೊಂದಲ ಕುರಿತು ಸ್ಪಷ್ಟನೆ ನೀಡಿದ್ರು.

ಸಿಎಂ ಯಡಿಯೂರಪ್ಪ ಪ್ರತಿಕ್ರಿಯೆ

ಚಿತ್ರದುರ್ಗದಲ್ಲಿ ವಿವಿಧ ಕಾಮಗಾರಿಗಳಿಗೆ ಚಾಲನೆ‌‌ ನೀಡಿದ‌ ಬಳಿಕ ಮಾತನಾಡಿದ ಅವರು, ಆದಷ್ಟು ಬೇಗ ಸಚಿವ ಸಂಪುಟ ಪುನಾರಚನೆ ಬಗ್ಗೆ ಮೂಡಿರುವ ಗೊಂದಲದ ಬಗ್ಗೆ ಬೇಗ ಕ್ಲಿಯರ್ ಮಾಡಿಕೊಡುವಂತೆ ಹೈಕಮಾಂಡ್​ಗೆ ಕೇಳುತ್ತೇನೆ. ಇದು ಬಿಟ್ರೇ ಬೇರೆ ಯಾವುದೇ ಗೊಂದಲವಿಲ್ಲ, ಎಲ್ಲವೂ ಸರಿ ಹೋಗುತ್ತೆ ಎಂದ್ರು.

ಸ್ಥಳೀಯ ಶಾಸಕ ತಿಪ್ಪಾರೆಡ್ಡಿಗೆ ಸಚಿವ ಸ್ಥಾನ ನೀಡುವ ವಿಚಾರ ಬಗ್ಗೆ ಪ್ರತಿಕ್ರಿಯಿಸಿದ ಸಿಎಂ, ಹೈಕಮಾಂಡ್ ಏನು ತೀರ್ಮಾನ ತೆಗೆದುಕೊಳ್ಳುತ್ತೋ ನೋಡೋಣ ಎಂದು ಜಾರಿಕೊಂಡರು. ಬಳಿಕ ಮುರುಘಾ ಮಠದ ಆವರಣದಲ್ಲಿ ನಿರ್ಮಾಣ ಆಗಿರುವ ಐತಿಹಾಸಿಕ ವಸ್ತು ಸಂಗ್ರಹಾಲಯವನ್ನು ಉದ್ಘಾಟನೆ‌ ಮಾಡಲಾಯಿತು.

ABOUT THE AUTHOR

...view details