ಕರ್ನಾಟಕ

karnataka

ವರುಣನ ಆಗಮನದ ಖುಷಿಯಲ್ಲಿ ಕೊಳವೆ ಬಾವಿ ಮರೆತ ರೈತ... ಕಳ್ಳರು ಮಾಡಿದ್ದೇನು ಗೊತ್ತಾ?

ಚಿತ್ರದುರ್ಗದಲ್ಲಿ ಮಳೆ ಆಗಮಿಸುತ್ತಿದ್ದಂತೆ ತಮ್ಮ ಬೋರ್​ವೆಲ್​ಗಳನ್ನು ಮರೆತಿರುವ ರೈತರಿಗೆ ಕಳ್ಳರು ಕೇಬಲ್ ಕದಿಯುವ ಮೂಲಕ ಶಾಕ್​ ನೀಡಿದ್ದಾರೆ.

By

Published : Oct 29, 2019, 9:13 PM IST

Published : Oct 29, 2019, 9:13 PM IST

bore-well-cable-theft-in-chitradurga

ಚಿತ್ರದುರ್ಗ:ಜಿಲ್ಲೆಯಲ್ಲಿಮಳೆ ಆಗಮಿಸುತ್ತಿದ್ದಂತೆ ತಮ್ಮ ಬೋರ್​ವೆಲ್​ಗಳನ್ನು ಮರೆತಿರುವ ರೈತರಿಗೆ ಕಳ್ಳರು ಕೇಬಲ್ ಕದಿಯುವ ಮೂಲಕ ಶಾಕ್​ ನೀಡಿದ್ದಾರೆ. ಹೊಸದುರ್ಗ ತಾಲೂಕಿನ ಹಕ್ಕಿತಿಮ್ಮಯ್ಯನಹಟ್ಟಿ ಗ್ರಾಮದ 25 ಬೋರ್​ವೆಲ್​ಗಳ ಕೇಬಲ್​​ಗಳನ್ನು ಕಳ್ಳರು ಕದ್ದಿದ್ದಾರೆ.

ಮಳೆಯಿಲ್ಲದೆ ಪರಿತಪಿಸುತಿದ್ದ ರೈತರು ಪ್ರತಿದಿನ ತಪ್ಪದೇ ಬೋರ್​ವೆಲ್ ಚಾಲು ಮಾಡುತ್ತಿದ್ದರು. ಅದ್ರೆ ಒಂದು ತಿಂಗಳಿಂದ ತಾಲೂಕಿನಲ್ಲಿ ಸಮೃದ್ಧಿ ಮಳೆಯಾದ ಪರಿಣಾಮ ರೈತರು ಬೋರ್​ವೆಲ್​​​ಗಳ ಕಡೆ ತಲೆಯೇ ಹಾಕಿರಲಿಲ್ಲ. ಇದನ್ನೇ ಬಂಡವಾಳ ಮಾಡಿಕೊಂಡ ಕಳ್ಳರು ತಮ್ಮ ಕೈಚಳಕ ತೋರಿಸಿದ್ದಾರೆ.

ಕೇಬಲ್​ ಕದ್ದಿರುವುದು

ಇದರಿಂದ ರೈತರಿಗೆ ಲಕ್ಷಾಂತರ ರೂ. ನಷ್ಟ ಉಂಟಾಗಿದೆ. ಅಲ್ಲದೆ ಒಂದೊಂದು ಬೋರ್​ವೆಲ್ ಮೋಟಾರ್ ಮೇಲೆತ್ತಿ ಕೇಬಲ್ ಜೋಡಿಸಿಕೊಳ್ಳವ ಅನಿವಾರ್ಯತೆ ಎದುರಾಗಿದೆ. ಇನ್ನೂ ಬೇರೆ ಬೇರೆ ಜಮೀನುಗಳಲ್ಲಿ ಕೇಬಲ್ ಕಳ್ಳತನ ಮಾಡುವ ಸಾಧ್ಯತೆಯಿದ್ದು, ರಾತ್ರಿ, ಹಗಲು ವೇಳೆ ಅನುಮಾನಾಸ್ಪದವಾಗಿ ತಿರುಗಾಡುವ ವ್ಯಕ್ತಿಗಳ ಮೇಲೆ ಗ್ರಾಮಸ್ಥರು ನಿಗವಹಿಸಿದ್ದಾರೆ.

ABOUT THE AUTHOR

...view details