ಕರ್ನಾಟಕ

karnataka

By

Published : Dec 6, 2020, 10:18 AM IST

ETV Bharat / state

ಬೈಕ್‌ಗೆ ಆಟೋ ಡಿಕ್ಕಿ; ಸ್ಥಳದಲ್ಲೇ ಕೊನೆಯುಸಿರೆಳೆದ ಸವಾರ

ದ್ವಿಚಕ್ರ ವಾಹನದಲ್ಲಿ ರಂಗಸ್ವಾಮಿ ಎನ್ನುವವರು ಮನೆಗೆ ತೆರಳುತ್ತಿದ್ದ ಸಂದರ್ಭ, ಆಟೋವೊಂದು ಡಿಕ್ಕಿ ಹೊಡೆದಿದೆ. ಪರಿಣಾಮ ಬೈಕ್ ಸವಾರ ರಂಗಸ್ವಾಮಿಯ ತಲೆ ಭಾಗಕ್ಕೆ ಗಂಭೀರ ಗಾಯವಾಗಿ ಸಾವನ್ನಪ್ಪಿದ್ದಾನೆ..

bike - auto accident in holalkere ; one died at spot
ಬೈಕ್‌ಗೆ ಆಟೋ ಡಿಕ್ಕಿ; ಸ್ಥಳದಲ್ಲೇ ಕೊನೆಯುಸಿರೆಳೆದ ಸವಾರ

ಚಿತ್ರದುರ್ಗ: ಚಲಿಸುತ್ತಿದ್ದ ಬೈಕ್‌ಗೆ ಆಟೋ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಸಾವನಪ್ಪಿದ ಘಟನೆ ಜಿಲ್ಲೆಯ ಹೊಳೆಲ್ಕೆರೆ ತಾಲೂಕಿನ ಆರ್​ಡಿ ಕಾವಲ್ ಬಳಿ ನಡೆದಿದೆ.

ಬೈಕ್ ಸವಾರ ರಂಗಸ್ವಾಮಿ (32) ಮೃತ ದುರ್ದೈವಿ

ಬೈಕ್ ಸವಾರ ರಂಗಸ್ವಾಮಿ (32) ಮೃತ ದುರ್ದೈವಿಯಾಗಿದ್ದು, ದ್ವಿಚಕ್ರ ವಾಹನದಲ್ಲಿ ಮನೆಗೆ ತೆರಳುತ್ತಿದ್ದ ಸಂದರ್ಭ ಈ ಘಟನೆ ನಡೆದಿದೆ. ಏಕಾಏಕಿ ಆಟೋ ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ರಂಗಸ್ವಾಮಿಯ ತಲೆ ಭಾಗಕ್ಕೆ ಗಂಭೀರ ಗಾಯವಾಗಿ ಸಾವನ್ನಪ್ಪಿದ್ದಾನೆಂದು ಹೇಳಲಾಗುತ್ತಿದೆ‌.

ಈ ಸುದ್ದಿಯನ್ನೂ ಓದಿ:ಅಪಘಾತವಾಗಿ ಗಂಭೀರ ಗಾಯಗೊಂಡು ನರಳಾಡಿದ ವ್ಯಕ್ತಿ : ಸಹಾಯಕ್ಕೆ ಬಾರದ ಜನ

ಹೊಳಲ್ಕೆರೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ಸಂಭವಿಸಿದೆ.‌

ABOUT THE AUTHOR

...view details