ಕರ್ನಾಟಕ

karnataka

By

Published : Oct 29, 2021, 10:51 AM IST

ETV Bharat / state

'ಭಜರಂಗಿ-2': ಶಿವಣ್ಣನ ಕಟೌಟ್​ಗೆ ಅಭಿಮಾನಿಗಳಿಂದ ಹಾಲಿನ ಅಭಿಷೇಕ

'ಭಜರಂಗಿ-2' ಬಿಡುಗಡೆಯಾದ ಹಿನ್ನೆಲೆಯಲ್ಲಿ ಚಿತ್ರದುರ್ಗದ ಪ್ರಸನ್ನ ಥಿಯೇಟರ್​ ಅನ್ನು ಅಭಿಮಾನಿಗಳು ಸಿಂಗರಿಸಿ, ಶಿವಣ್ಣನ ಕಟೌಟ್​ಗೆ ಪುಷ್ಪಮಾಲೆ, ನಿಂಬೆಹಣ್ಣಿನ ಹಾರ ಹಾಕಿ ಹಾಲಿನ ಅಭಿಷೇಕ ಮಾಡಿದರು.

ಶಿವಣ್ಣನ ಕಟೌಟ್​ಗೆ ಅಭಿಮಾನಿಗಳಿಂದ ಹಾಲಿನ ಅಭಿಷೇಕ
ಶಿವಣ್ಣನ ಕಟೌಟ್​ಗೆ ಅಭಿಮಾನಿಗಳಿಂದ ಹಾಲಿನ ಅಭಿಷೇಕ

ಚಿತ್ರದುರ್ಗ: ಹ್ಯಾಟ್ರಿಕ್ ಹೀರೋ ಡಾ. ಶಿವರಾಜ್ ಕುಮಾರ್ ಹಾಗೂ ಭಾವನಾ ಮೆನನ್ ಅಭಿನಯದ ಬಹುನಿರೀಕ್ಷಿತ ಭಜರಂಗಿ-2 ಚಿತ್ರ ಇಂದು ಬಿಡುಗಡೆಯಾಗಿದ್ದು, ಭರ್ಜರಿ ಪ್ರದರ್ಶನ ಕಾಣುತ್ತಿದೆ.

'ಭಜರಂಗಿ-2' ಬಿಡುಗಡೆ ಹಿನ್ನೆಲೆಯಲ್ಲಿ ಚಿತ್ರದುರ್ಗದ ಪ್ರಸನ್ನ ಥಿಯೇಟರ್​ ಅನ್ನು ಅಭಿಮಾನಿಗಳು ಸಿಂಗರಿಸಿ, ಶಿವಣ್ಣನ ಕಟೌಟ್​ಗೆ ಪುಷ್ಪಮಾಲೆ, ನಿಂಬೆಹಣ್ಣಿನ ಹಾರ ಹಾಕಿ ಹಾಲಿನ ಅಭಿಷೇಕ ಮಾಡಿದರು. ಸಿನಿಮಾ ರಿಲೀಸ್​ಗೂ ಮುನ್ನ ಕುಂಬಳಕಾಯಿ ಒಡೆದು, ಥಿಯೇಟರ್ ಆವರಣದಲ್ಲಿ ಪಟಾಕಿ ಸಿಡಿಸಿ ಸಂಭ್ರಮಿಸಿದರು.

ಥಿಯೇಟರ್ ಆವರಣದಲ್ಲಿ ಪಟಾಕಿ ಸಿಡಿಸಿ ಸಂಭ್ರಮಿಸಿದ ಅಭಿಮಾನಿಗಳು

ಚಳ್ಳಕೆರೆ ನಗರದ ರಾಮಕೃಷ್ಣ ಥಿಯೇಟರ್​ನಲ್ಲಿ ಸಹ ಸಿನಿಮಾ ರಿಲೀಸ್ ಆಗಿದ್ದು, 20 ತಿಂಗಳ ನಂತರ ಶಿವಣ್ಣ ಚಿತ್ರ ನೋಡಲು ಅಭಿಮಾನಿಗಳು ಮುಗಿಬಿದ್ದಿದ್ದಾರೆ.

ABOUT THE AUTHOR

...view details