ಚಿತ್ರದುರ್ಗ:ಜಿಲ್ಲೆಯಲ್ಲಿ ರಸಗೊಬ್ಬರವನ್ನು ಅಕ್ರಮವಾಗಿ ಸಂಗ್ರಹಣೆ ಮಾಡಲಾಗುತ್ತಿದೆ ಎಂದು ಆರೋಪಿಸಿ ರೈತರು ಪ್ರತಿಭಟನೆ ನಡೆಸಿದರು.
ಚಿತ್ರದುರ್ಗದಲ್ಲಿ ಅಕ್ರಮ ರಸಗೊಬ್ಬರ ಸಂಗ್ರಹಣೆ ಆರೋಪ: ರೈತರಿಂದ ಪ್ರತಿಭಟನೆ - Chitradurga news 2020
ಯೂರಿಯಾ ಗೊಬ್ಬರಕ್ಕಾಗಿ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಚಿತ್ರದುರ್ಗದ ರೈತರು ಪ್ರತಿಭಟಿಸಿದ್ದಾರೆ.
![ಚಿತ್ರದುರ್ಗದಲ್ಲಿ ಅಕ್ರಮ ರಸಗೊಬ್ಬರ ಸಂಗ್ರಹಣೆ ಆರೋಪ: ರೈತರಿಂದ ಪ್ರತಿಭಟನೆ accused-of-illegal-fertilizer-procurement-in-chitradurga](https://etvbharatimages.akamaized.net/etvbharat/prod-images/768-512-8711951-177-8711951-1599488809679.jpg)
ಚಿತ್ರದುರ್ಗದಲ್ಲಿ ಅಕ್ರಮ ರಸಗೊಬ್ಬರ ಸಂಗ್ರಹಣೆ
ಯೂರಿಯಾ ಗೊಬ್ಬರಕ್ಕಾಗಿ ರೈತರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಧರಣಿ ನಡೆಸಿದ ಅವರು, ಯೂರಿಯಾ ರಸಗೊಬ್ಬರ ತುಂಬಿದ್ದ ಲಾರಿ ತಡೆದು ಜಿಲ್ಲೆಯ ಹೊಸದುರ್ಗ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿ ಗೊಬ್ಬರಕ್ಕಾಗಿ ಆಕ್ರೋಶ ವ್ಯಕ್ತಪಡಿಸಿದರು.
ಚಿತ್ರದುರ್ಗದಲ್ಲಿ ಅಕ್ರಮ ರಸಗೊಬ್ಬರ ಸಂಗ್ರಹಣೆ ಆರೋಪ
ರಸಗೊಬ್ಬರವನ್ನು ಅಕ್ರಮವಾಗಿ ಸಂಗ್ರಹಣೆ ಮಾಡಲಾಗುತ್ತಿದೆ ಎಂದು ಆರೋಪಿಸಿದ ರೈತರು, ಕೂಡಲೇ ಸ್ಥಳಕ್ಕೆ ತಹಶೀಲ್ದಾರ್ ಬರುವಂತೆ ಪಟ್ಟು ಹಿಡಿದರು. ಇದೇ ವೇಳೆ ಗೊಬ್ಬರ ಸಿಗದೆ ರೈತರು ಹೈರಾಣಾಗಿದ್ದು, ಕೂಡಲೇ ರಸಗೊಬ್ಬರ ವಿತರಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಮಾಡಿಕೊಂಡರು.