ಚಿತ್ರದುರ್ಗ: ಅಪಘಾತವಾಗಿ ಸ್ಥಳದಲ್ಲೇ ಆಟೋ ಚಾಲಕ ಬಿದ್ದು ನರಳಾಡುತ್ತಿದ್ರೂ ಸಹ ಆಸ್ಪತ್ರೆಗೆ ಸಾಗಿಸದೇ ಜನರು ನಿಂತು ನೋಡುತ್ತಾ ಅಮಾನವೀಯತೆ ಮೆರೆದಿರುವ ಘಟನೆ ಮೊಳಕಾಲ್ಮೂರು ತಾಲೂಕಿನ ಕೋನಾಪುರ ಗ್ರಾಮದ ಬಳಿ ನಡೆದಿದೆ.
ಅಪಘಾತವಾಗಿ ವ್ಯಕ್ತಿ ನರಳಾಟ: ಆಸ್ಪತ್ರೆಗೆ ಸೇರಿಸದೆ ವಿಡಿಯೋ ಮಾಡಿ ಜನರ ಅಮಾನವೀಯತೆ - Accident at Chitradurga
ಅಪಘಾತ ನಡೆದು ತೀವ್ರ ರಕ್ತಸ್ರಾವವಾಗಿ ನರಳುತ್ತಿದ್ದರೂ ಸಹ ಗಾಯಾಳುವನ್ನು ಲೆಕ್ಕಿಸದ ಜನರು ಆತನನ್ನು ಆಸ್ಪತ್ರೆಗೆ ಸೇರಿಸದೆ ಅಮಾನವೀಯತೆ ಮೆರೆದಿರುವ ಘಟನೆ ಚಿತ್ರದುರ್ಗ ಜಿಲ್ಲೆಯಲ್ಲಿ ನಡೆದಿದೆ.
![ಅಪಘಾತವಾಗಿ ವ್ಯಕ್ತಿ ನರಳಾಟ: ಆಸ್ಪತ್ರೆಗೆ ಸೇರಿಸದೆ ವಿಡಿಯೋ ಮಾಡಿ ಜನರ ಅಮಾನವೀಯತೆ fsdf](https://etvbharatimages.akamaized.net/etvbharat/prod-images/768-512-8382705-thumbnail-3x2-vish.jpg)
ಜನರ ಅಮಾನವೀಯತೆ
ಮಾನವೀಯತೆ ಮರೆಯಾಯಿತೇ?
ಬೊಮ್ಮದೇವರಹಳ್ಳಿಯ ಮಾರೇಶ್ (31) ಮೃತ ಟಂಟಂ ಆಟೋ ಚಾಲಕ. ಈತ ತೀವ್ರ ರಕ್ತಸ್ರಾವವಾಗಿ ನರಳುತ್ತಿದ್ದ ವೇಳೆ ಜನ ಆತನನ್ನು ಆಸ್ಪತ್ರೆಗೆ ಸಾಗಿಸುವ ಬದಲು ವಿಡಿಯೋ ಮಾಡಿಕೊಳ್ಳುತ್ತಿದ್ದರು.
ಈ ವೇಳೆ ಸ್ಥಳಕ್ಕೆ ಆಗಮಿಸಿದ ಪೊಲೀಸ್ ಕಾನ್ಸ್ಟೇಬಲ್ ಕೂಡಾ ನಿರ್ಲಕ್ಷ್ಯವಹಿಸಿ ಆ್ಯಂಬುಲೆನ್ಸ್ಗಾಗಿ ಕಾದು ನಿಂತಿದ್ದ ದೃಶ್ಯ ಸೆರೆಯಾಗಿದೆ.