ಕರ್ನಾಟಕ

karnataka

By

Published : Oct 22, 2020, 2:20 PM IST

ETV Bharat / state

ಕೆಎಎಸ್ ಅಧಿಕಾರಿ ಕೆ.ಎನ್.ರುದ್ರೇಶ್ ಮನೆ ಮೇಲೆ ಎಸಿಬಿ ದಾಳಿ

ಗದಗ ಎಸಿಬಿ ಮತ್ತು ಡಿವೈಎಸ್​​ಪಿ ವಾಸುದೇವ ನೇತೃತ್ವದ ತಂಡ ಗದಗ ನಗರಾಭಿವೃದ್ಧಿ ಕೋಶದ ನಿರ್ದೇಶಕ‌ ಕೆ.ಎನ್.ರುದ್ರೇಶ್ ಮನೆ ಮೇಲೆ ದಾಳಿ ನಡೆಸಿದೆ.

Acb ride
Acb ride

ಚಿತ್ರದುರ್ಗ: ಕೆಎಎಸ್ ಅಧಿಕಾರಿ ಹಾಗೂ ಗದಗ ನಗರಾಭಿವೃದ್ಧಿ ಕೋಶದ ನಿರ್ದೇಶಕ‌ ಕೆ.ಎನ್.ರುದ್ರೇಶ್ ಮನೆ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಗದಗ ಎಸಿಬಿ ಮತ್ತು ಡಿವೈಎಸ್​​ಪಿ ವಾಸುದೇವ ನೇತೃತ್ವದಲ್ಲಿ ಮೂರು ಕಡೆ ದಾಳಿ ನಡೆಸಲಾಗಿದ್ದು, ಪರಿಶೀಲನೆ ಮಾಡಲಾಗುತ್ತಿದೆ. ಚಿಕ್ಕಜಾಜೂರಿನಲ್ಲಿರುವ ಮನೆ, ಫಾರಂ ಹೌಸ್ ಮೇಲೆ ಎಸಿಬಿ ಅಧಿಕಾರಿಗಳ ತಂಡ ದಾಳಿ ನಡೆಸಿದೆ.

ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ಚಿಕ್ಕಜಾಜೂರು ಗ್ರಾಮದಲ್ಲಿರುವ ಕೆ.ಎನ್.ರುದ್ರೇಶ್ ಅವರಿಗೆ ಸೇರಿದ ಮನೆ ಮೇಲೆ ಸಹ ದಾಳಿ ನಡೆಸಿ, ಪರಿಶೀಲನೆ ಮುಂದುವರೆಸಲಾಗಿದೆ. ಜೊತೆಗೆ ಗದಗ ನಗರದ ಮನೆ, ಕಚೇರಿ ಮೇಲೂ ದಾಳಿ ನಡೆಸಲಾಗಿದ್ದು, ಏನೆಲ್ಲಾ ವಶಕ್ಕೆ ಪಡೆದಿದ್ದಾರೆ ಎಂಬುದು ಇನ್ನೂ ತಿಳಿದು ಬಂದಿಲ್ಲ.

ABOUT THE AUTHOR

...view details