ಚಿತ್ರದುರ್ಗ:ಲಂಚ ಪಡೆದು ಸರಕು ಲಾರಿ ಬಿಟ್ಟು ಕಳುಹಿಸಿರುವ ಆರೋಪದಡಿ ಜಿಲ್ಲೆಯ ತುರುವನೂರು ಪೊಲೀಸ್ ಠಾಣೆಯ ಪಿಎಸ್ಐ, ಎಎಸ್ಐ ಸೇರಿದಂತೆ ಇಬ್ಬರು ಪೇದೆಗಳನ್ನು ಅಮಾನತು ಮಾಡಲಾಗಿದೆ.
ಲಂಚಾ ಪಡೆದು ಸರಕು ಲಾರಿ ಬಿಟ್ಟು ಕಳುಹಿಸಿದ ಆರೋಪ: ನಾಲ್ವರು ಪೊಲೀಸರು ಅಮಾನತು - police suspended
ಲಂಚ ಪಡೆದು ಅಧಿಕ ಅದಿರು ತುಂಬಿದ್ದ ಲಾರಿ ಸಾಗಣೆಗೆ ಅವಕಾಶ ಮಾಡಿಕೊಟ್ಟ ಆರೋಪದಡಿ ತುರುವನೂರಿನ ನಾಲ್ವರು ಪೊಲೀಸರನ್ನು ಅಮಾನತು ಮಾಡಲಾಗಿದೆ. ಚಿತ್ರದುರ್ಗದ ಪೊಲೀಸ್ ವರಿಷ್ಠಾಧಿಕಾರಿ ಜಿ.ರಾಧಿಕಾ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.
![ಲಂಚಾ ಪಡೆದು ಸರಕು ಲಾರಿ ಬಿಟ್ಟು ಕಳುಹಿಸಿದ ಆರೋಪ: ನಾಲ್ವರು ಪೊಲೀಸರು ಅಮಾನತು 4 Police suspended in Chitradurga for take bribe from lorry driver](https://etvbharatimages.akamaized.net/etvbharat/prod-images/768-512-7020790-829-7020790-1588343029816.jpg)
ಲಂಚಾ ಪಡೆದು ಸರಕು ಲಾರಿ ಬಿಟ್ಟುಕಳುಹಿಸಿದ ಆರೋಪ: ನಾಲ್ವರು ಪೋಲಿಸರು ಅಮಾನತು
ಚಿತ್ರದುರ್ಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ರಾಧಿಕಾ ಅಮಾನತು ಆದೇಶ ಹೊರಡಿಸಿದ್ದಾರೆ. ಚಿತ್ರದುರ್ಗ ತಾಲೂಕಿನಲ್ಲಿರುವ ತುರುವನೂರು ಪೊಲೀಸ್ ಠಾಣೆಯ ಪಿಎಸ್ಐ ಯಶೋದಮ್ಮ, ಎಎಸ್ಐ ಸುದರ್ಶನ, ಚಾಲಕ ನಾಗರಾಜ, ಪೇದೆ ಮಂಜುನಾಥ ಅಮಾನತಾಗಿದ್ದು, ಅಕ್ರಮ ಅದಿರು ಲಾರಿ ಸಾಗಣೆಗೆ ಅವಕಾಶ ನೀಡಿದ ಆರೋಪ ಕೇಳಿ ಬಂದಿದೆ.
ಲಂಚ ಪಡೆದು ಅಧಿಕ ಅದಿರು ತುಂಬಿದ್ದ ಲಾರಿ ಸಾಗಣೆಗೆ ಅವಕಾಶ ಹಿನ್ನೆಲೆ ಅಮಾನತು ಮಾಡಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಜಿ.ರಾಧಿಕಾ ಮಾಹಿತಿ ನೀಡಿದರು.