ಚಿತ್ರದುರ್ಗ:27 ವರ್ಷದ ವೈದ್ಯ ಹಾಗೂ 8 ವರ್ಷದ ಬಾಲಕನಿಗೆ ಸೋಂಕು ತಗುಲಿರುವುದು ದೃಢವಾಗಿದ್ದು, ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 47ಕ್ಕೆ ಏರಿಕೆಯಾಗಿದೆ.
ವೈದ್ಯ ಮತ್ತು ಬಾಲಕನಲ್ಲಿ ಕೊರೊನಾ ದೃಢ: ಚಿತ್ರದುರ್ಗದಲ್ಲಿ 47ಕ್ಕೇರಿದ ಸೋಂಕಿತರ ಸಂಖ್ಯೆ - ಚಿತ್ರದುರ್ಗ ಲೆಟೆಸ್ಟ್ ನ್ಯೂಸ್
ಚಿಕ್ಕಮಗಳೂರು ಜಿಲ್ಲೆಯ ಅಜ್ಜಂಪುರದ ಕ್ವಾರಂಟೈನ್ ಕೇಂದ್ರದಲ್ಲಿ ಕಾರ್ಯನಿರ್ವಹಿಸಿದ್ದ ವೈದ್ಯ ಮತ್ತು 8 ವರ್ಷದ ಬಾಲಕನಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 47ಕ್ಕೆ ಏರಿಕೆಯಾಗಿದೆ.
![ವೈದ್ಯ ಮತ್ತು ಬಾಲಕನಲ್ಲಿ ಕೊರೊನಾ ದೃಢ: ಚಿತ್ರದುರ್ಗದಲ್ಲಿ 47ಕ್ಕೇರಿದ ಸೋಂಕಿತರ ಸಂಖ್ಯೆ Chitradurga corona case](https://etvbharatimages.akamaized.net/etvbharat/prod-images/768-512-07:52:23:1593008543-kn-ctd-06-24-02positive-av-7204336-24062020195054-2406f-1593008454-381.jpg)
Chitradurga corona case
ಜಿಲ್ಲೆಯ ಹಿರಿಯೂರು ಪಟ್ಟಣದ ವೇದಾವತಿ ಬಡಾವಣೆ ಮೂಲದ ವೈದ್ಯನಿಗೆ ಕೊರೊನಾ ಪಾಸಿಟಿವ್ ಬಂದಿದೆ. ಚಿಕ್ಕಮಗಳೂರು ಜಿಲ್ಲೆಯ ಅಜ್ಜಂಪುರದ ಕ್ವಾರಂಟೈನ್ ಕೇಂದ್ರದಲ್ಲಿ ಕಾರ್ಯನಿರ್ವಹಿಸಿದ್ದ ವೈದ್ಯ ಇವರಾಗಿದ್ದು, ಸೋಂಕು ದೃಢವಾದ ಬೆನ್ನಲ್ಲೇ ಇವರನ್ನು ಚಿತ್ರದುರ್ಗದ ಕೋವಿಡ್-19 ಆಸ್ಪತ್ರೆಗೆ ದಾಖಲಿಸಲಾಗಿದೆ.
8 ವರ್ಷದ ಬಾಲಕನಲ್ಲೂ ಕೂಡ ಸೋಂಕು ದೃಢಪಟ್ಟಿದ್ದು, ಅಂತರ್ ಜಿಲ್ಲಾ ಪ್ರಯಾಣದಿಂದ ಸೋಂಕು ತಗುಲಿರುವ ಶಂಕೆ ವ್ಯಕ್ತವಾಗಿದೆ.