ಕರ್ನಾಟಕ

karnataka

By

Published : May 30, 2022, 6:12 PM IST

ETV Bharat / state

ವಿವಾಹಕ್ಕೆ ನಿರಾಕರಣೆ: 9 ವರ್ಷದಿಂದ ಪ್ರೀತಿಸುತ್ತಿದ್ದ ಯುವಕ ಆತ್ಮಹತ್ಯೆ

ನನ್ನ ಸಾವಿಗೆ ನ್ಯಾಯ ದೊರೆಯಬೇಕಾದರೆ ಆಕೆಗೆ ಶಿಕ್ಷೆಯಾಗಬೇಕು, ನನ್ನ ಚಿತೆಗೆ ಆಕೆಯೇ ಅಗ್ನಿಸ್ಪರ್ಶ ಮಾಡಬೇಕು, ಆಕೆ ಬರುವವರೆಗೆ ನನ್ನ ಶರೀರವನ್ನು ಕೆಳಗಿಳಿಸಬೇಡಿ ಎಂಬುದಾಗಿ ಯುವಕ ಡೆತ್ ನೋಟ್ ಬರೆದಿದ್ದಾನೆ.

9 ವರ್ಷದಿಂದ ಪ್ರೀತಿಸುತ್ತಿದ್ದ ಯುವಕ ಆತ್ಮಹತ್ಯೆ
9 ವರ್ಷದಿಂದ ಪ್ರೀತಿಸುತ್ತಿದ್ದ ಯುವಕ ಆತ್ಮಹತ್ಯೆ

ಚಿಕ್ಕಮಗಳೂರು: ಪ್ರೀತಿಸಿದ ಹುಡುಗಿ ಮದುವೆಯಾಗಲು ನಿರಾಕರಣೆ ಮಾಡಿದ್ದಕ್ಕಾಗಿ ಯುವಕ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.

ಜಿಲ್ಲೆಯ ನರಸಿಂಹರಾಜಪುರ ತಾಲೂಕಿನ ಮುತ್ತಿನಕೊಪ್ಪ ಸಮೀಪದ ಶಂಕರಪುರದ ಚೇತನ್ (31) ಆತ್ಮಹತ್ಯೆಗೆ ಶರಣಾದವ. ಈತ ಯುವತಿಯೊಬ್ಬಳನ್ನು ಕಳೆದ ಒಂಬತ್ತು ವರ್ಷಗಳಿಂದ ಪ್ರೇಮಿಸುತ್ತಿದ್ದು, ಯುವತಿ ಮದುವೆಗೆ ನಿರಾಕರಿಸಿದ್ದಳಂತೆ. ಇದರಿಂದ ಮನನೊಂದ ಯುವಕ ಆಕೆ ನನ್ನಿಂದ ಇಲ್ಲಿಯವರೆಗೂ ನಾಲ್ಕು ಲಕ್ಷ ಹಣವನ್ನು ಪಡೆದಿದ್ದಾಳೆ ಎಂದು ವಾಯ್ಸ್​ ಮೆಸೇಜ್​ ಮಾಡಿ ಸಾಯುವ ಮುನ್ನ ಸಂಬಂಧಿಕರಿಗೆ ಕಳುಹಿಸಿದ್ದಾನೆ.

ನನ್ನ ಸಾವಿಗೆ ನ್ಯಾಯ ದೊರೆಯಬೇಕಾದರೆ ಆಕೆಗೆ ಶಿಕ್ಷೆಯಾಗಬೇಕು, ನನ್ನ ಚಿತೆಗೆ ಆಕೆಯೇ ಅಗ್ನಿಸ್ಪರ್ಶ ಮಾಡಬೇಕು, ಆಕೆ ಬರುವವರೆಗೆ ನನ್ನ ಶರೀರವನ್ನು ಕೆಳಗಿಳಿಸಬೇಡಿ ಎಂಬುದಾಗಿ ಡೆತ್ ನೋಟ್ ಕೂಡ ಬರೆದಿದ್ದಾನೆ.

ನರಸಿಂಹರಾಜಪುರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದು, ಈ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಇದನ್ನೂ ಓದಿ: ಕಿಡಿಗೇಡಿ ಕೃತ್ಯ ಖಂಡನೀಯ: ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಲಿ: ಟಿಕಾಯತ್​ ಒತ್ತಾಯ

ABOUT THE AUTHOR

...view details