ಕರ್ನಾಟಕ

karnataka

By

Published : Nov 4, 2019, 12:26 PM IST

Updated : Nov 4, 2019, 1:03 PM IST

ETV Bharat / state

ವಿದೇಶದ ಬದಲು ಯಮಲೋಕಕ್ಕೆ ಟಿಕೆಟ್​​​​ ನೀಡಿದ ರಸ್ತೆ!

ಇಲ್ಲಿನ ರಸ್ತೆಯಲ್ಲಿ ಬಿದ್ದಿರುವ ಗುಂಡಿಗೆ ಬೈಕ್​ ಇಳಿದ ಪರಿಣಾಮ ನೆಲಕ್ಕೆ ಉರುಳಿ ಬಿದ್ದು ಯುವತಿಯೊಬ್ಬಳು ಬಲಿಯಾಗಿರುವ ಘಟನೆ ಚಿಕ್ಕಮಗಳೂರಿನ  ದಂಡರಮಕ್ಕಿ ಸಮೀಪ ನಡೆದಿದೆ.

ಸಾವಿಗೀಡಾದ ಸಿಂದೂಜಾ

ಚಿಕ್ಕಮಗಳೂರು: ಇಲ್ಲಿನ ರಸ್ತೆಯಲ್ಲಿ ಬಿದ್ದಿರುವ ಗುಂಡಿಗೆ ಬೈಕ್​ ಇಳಿದ ಪರಿಣಾಮ ನೆಲಕ್ಕೆ ಉರುಳಿ ಬಿದ್ದು ಯುವತಿಯೊಬ್ಬಳು ಬಲಿಯಾಗಿರುವ ಘಟನೆ ಚಿಕ್ಕಮಗಳೂರಿನ ದಂಡರಮಕ್ಕಿ ಸಮೀಪ ನಡೆದಿದೆ.

ಪಾಸ್​ಪೋರ್ಟ್ ಪರಿಶೀಲನೆಗಾಗಿ​ಗಾಗಿ ತನ್ನ ತಂದೆಯ ಜೊತೆ ಬೈಕ್ ನಲ್ಲಿ ಹೋಗುತ್ತಿದ್ದ ವೇಳೆ ರಸ್ತೆಯಲ್ಲಿ ಬಿದ್ದಿದ್ದ ಗುಂಡಿಯನ್ನು ಗಮನಿಸದೇ ಬೈಕ್ ಅನ್ನು ಅವರ ತಂದೆ ಗುಂಡಿಗೆ ಇಳಿಸಿದ್ದಾರೆ ಆಯ ತಪ್ಪಿ ನೆಲಕ್ಕೆ ಉರುಳಿದ ಸಿಂದೂಜಾ ಗಂಭೀರವಾಗಿ ಗಾಯಗೊಂಡಿದ್ದರು. ತಕ್ಷಣ ಸ್ಥಳೀಯ ಆಸ್ವತ್ರೆಗೆ ದಾಖಲು ಮಾಡಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೇ ಸಿಂದೂಜಾ (23) ಸಾವನ್ನಪ್ಪಿದ್ದಾಳೆ.

ವಿದೇಶಕ್ಕೆ ಹೋಗುವ ಆಸೆಯಲ್ಲಿದ್ದ ಸಿಂದೂಜಾ ಯಮಲೋಕಕ್ಕೆ ಪ್ರಯಾಣ ಬೆಳೆಸಿದ್ದಾಳೆ. ಚಿಕ್ಕಮಗಳೂರು ಪೊಲೀಸರು ಸ್ಥಳಕ್ಕೇ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.

Last Updated : Nov 4, 2019, 1:03 PM IST

For All Latest Updates

ABOUT THE AUTHOR

...view details