ಕರ್ನಾಟಕ

karnataka

ETV Bharat / state

ಕೆಎಸ್​​ಆರ್​ಟಿಸಿ ನೌಕರರ ಮುಷ್ಕರ: ಚಿಕ್ಕಮಗಳೂರು ವಿಭಾಗದಿಂದ 25 ಮಂದಿ ವರ್ಗಾವಣೆ - ಚಿಕ್ಕಮಗಳೂರು

ಕೆಎಸ್​​ಆರ್​​ಟಿಸಿ ನೌಕರರು ಹಮ್ಮಿಕೊಂಡಿರುವ ಮುಷ್ಕರ ಹಿನ್ನೆಲೆ ಚಿಕ್ಕಮಗಳೂರು ವಿಭಾಗದ 25 ಮಂದಿ ಸಾರಿಗೆ ನೌಕರರನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಲಾಗಿದೆ. ಚಿಕ್ಕಮಗಳೂರು ವಿಭಾಗದಿಂದ ಪುತ್ತೂರು ವಿಭಾಗಕ್ಕೆ ಈ ನೌಕರರನ್ನು ವರ್ಗಾವಣೆ ಮಾಡಲಾಗಿದೆ.

Chikkamagaluru
ಚಿಕ್ಕಮಗಳೂರು ವಿಭಾಗದಿಂದ 25 ಮಂದಿ ವರ್ಗಾವಣೆ

By

Published : Apr 10, 2021, 3:54 PM IST

ಚಿಕ್ಕಮಗಳೂರು: ಕಳೆದ 4 ದಿನಗಳಿಂದ 6ರನೇ ವೇತನ ಜಾರಿಗೆ ಆಗ್ರಹಿಸಿ ಕೆಎಸ್​​ಆರ್​​ಟಿಸಿ ನೌಕರರು ಹಮ್ಮಿಕೊಂಡಿರುವ ಮುಷ್ಕರ ಹಿನ್ನೆಲೆ ಚಿಕ್ಕಮಗಳೂರು ವಿಭಾಗದ 25 ಮಂದಿ ಸಾರಿಗೆ ನೌಕರರನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಲಾಗಿದೆ.

ವರ್ಗಾವಣೆ ಆದೇಶ ಪ್ರತಿ

21 ಚಾಲಕ ಹಾಗೂ ನಾಲ್ವರು ನಿರ್ವಾಹಕರನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಲಾಗಿದ್ದು, ಚಿಕ್ಕಮಗಳೂರು ವಿಭಾಗದಿಂದ ಪುತ್ತೂರು ವಿಭಾಗಕ್ಕೆ ಈ ನೌಕರರನ್ನು ವರ್ಗಾವಣೆ ಮಾಡಲಾಗಿದೆ. ಇಬ್ಬರು ಕಿರಿಯ ಸಹಾಯಕರು, ಇಬ್ಬರು ಮೆಕ್ಯಾನಿಕ್​ಗಳ ವರ್ಗಾವಣೆ ಸಹ ಆಗಿದ್ದು, ಕೆಎಸ್​​ಆರ್​ಟಿಸಿ ಮುಖ್ಯ ಸಂಚಾಲಕರು ಈ ಆದೇಶ ಹೊರಡಿಸಿದ್ದಾರೆ.

ABOUT THE AUTHOR

...view details