ಕರ್ನಾಟಕ

karnataka

By

Published : Jan 20, 2022, 8:02 PM IST

ETV Bharat / state

Watch - ಸಫಾರಿ ವೇಳೆ ಪ್ರವಾಸಿಗರಿಗೆ ಹುಲಿರಾಯನ ದರ್ಶನ

ಮುತ್ತೋಡಿ ಅಭಯಾರಣ್ಯದಲ್ಲಿ ಪ್ರವಾಸಿಗರಿಗೆ ಹುಲಿರಾಯ ದರ್ಶನ ನೀಡಿದ್ದು, ಸಫಾರಿ ಬಂದಿದ್ದಕ್ಕೂ ಸಾರ್ಥಕವಾಯಿತು ಎಂದು ಫುಲ್​ ಖುಷ್​ ಆಗಿದ್ದಾರೆ.

tiger
ಸಫಾರಿ ವೇಳೆ ಪ್ರವಾಸಿಗರಿಗೆ ಹುಲಿರಾಯನ ದರ್ಶನ

ಚಿಕ್ಕಮಗಳೂರು:ಚಿಕ್ಕಮಗಳೂರು ತಾಲೂಕಿನಮುತ್ತೋಡಿ ಅಭಯಾರಣ್ಯದಲ್ಲಿ ಸಫಾರಿಗೆ ಬಂದ ಪ್ರವಾಸಿಗರಿಗೆ ಹುಲಿರಾಯ ದರ್ಶನ ನೀಡಿದ್ದು, ಇದರ ವಿಡಿಯೋ ಸಖತ್​ ವೈರಲ್​ ಆಗಿದೆ.

ಸಫಾರಿ ವಾಹನದಲ್ಲಿ ತೆರಳುತ್ತಿದ್ದಾಗ ನಡು ರಸ್ತೆಯ ಮೇಲೆ ಹುಲಿ ಕಾಣಿಸಿಕೊಂಡಿದೆ. ಹುಲಿ ನೋಡಿದ ಪ್ರವಾಸಿಗರು ಫೋಟೋ ಕ್ಲಿಕ್ಕಿಸಿ, ವಿಡಿಯೋ ಚಿತ್ರೀಕರಿಸಿದ್ದಾರೆ. ಈ ವಿಡಿಯೋದಲ್ಲಿ ಹುಲಿ ತನ್ನ ಪಾಡಿಗೆ ತಾನು ಹೆಜ್ಜೆ ಇಡುತ್ತ ಸಾಗುವುದು ಕಂಡು ಬರುತ್ತದೆ.

ಸಫಾರಿ ವೇಳೆ ಪ್ರವಾಸಿಗರಿಗೆ ಹುಲಿರಾಯನ ದರ್ಶನ

ಇದನ್ನೂ ಓದಿ:Viral Video: ವ್ಹಾವ್! ಜಿಂಕೆಯ ಅದ್ಭುತ ಜಿಗಿತ ನೋಡಿ

ಕಾಡಿನ ಮಧ್ಯೆ ಇರುವ ಹುಲಿ ಪ್ರವಾಸಿಗರಿಗೆ ಕಾಣಸಿಗುವುದೇ ಅಪರೂಪವಾಗಿದೆ. ಹೀಗಾಗಿ ತಮಗೆ ಹುಲಿರಾಯ ದರ್ಶನ ನೀಡಿದ್ದಕ್ಕೆ ಪ್ರವಾಸಿಗರು ಸಫಾರಿ ಬಂದಿದ್ದಕ್ಕೂ ಸಾರ್ಥಕವಾಯಿತು ಎಂದು ಸಂತೋಷ ಪಟ್ಟಿದ್ದಾರೆ.

ಜಾಹೀರಾತು- ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ABOUT THE AUTHOR

...view details