ಕರ್ನಾಟಕ

karnataka

ETV Bharat / state

ಚಾರ್ಮಾಡಿ ಘಾಟಿ ಬಂದ್: ಆಸ್ಪತ್ರೆಗೆ ತೆರಳಲಾಗದೆ ಆಂಬ್ಯಲೆನ್ಸ್​ನಲ್ಲೇ ರೋಗಿ ವಿಲ ವಿಲ - Charmadi Ghat

ಭಾರಿ ಮಳೆ ಹಿನ್ನೆಲೆ ಮಲೆನಾಡಿನ ಚಾರ್ಮಾಡಿ ಘಾಟಿಯಲ್ಲಿ ನಿರಂತರವಾಗಿ ಭೂ ಕುಸಿತ ಸಂಭವಿಸುತ್ತಿದೆ. ಹೀಗಾಗಿ ಎರಡು ದಿನಗಳ ಕಾಲ ವಾಹನ ಸಂಚಾರ ಬಂದ್ ಮಾಡಲಾಗಿದೆ.

ಚಾರ್ಮಾಡಿ ಘಾಟಿ ಬಂದ್: ಆಸ್ಪತ್ರೆಗೆ ತೆರಳಲಾಗದೆ ರೋಗಿ ಪರದಾಟ

By

Published : Aug 8, 2019, 4:53 PM IST

ಚಿಕ್ಕಮಗಳೂರು:ಜಿಲ್ಲೆಯ ಮೂಡಿಗೆರೆ ತಾಲೂಕಿನಲ್ಲಿರುವ ಚಾರ್ಮಾಡಿ ಘಾಟಿಯಲ್ಲಿ ನಿರಂತರವಾಗಿ ಭೂಕುಸಿತ ಸಂಭವಿಸುತ್ತಿರುವ ಹಿನ್ನೆಲೆ ಇಂದು ಮತ್ತು ನಾಳೆ ಚಾರ್ಮಾಡಿ ಘಾಟಿಯಲ್ಲಿ ವಾಹನ ಸಂಚಾರ ಬಂದ್ ಮಾಡಲಾಗಿದೆ.

ಚಾರ್ಮಾಡಿ ಘಾಟಿ ಬಂದ್: ಆಸ್ಪತ್ರೆಗೆ ತೆರಳಲಾಗದೆ ರೋಗಿ ಪರದಾಟ

ಮಂಗಳೂರಿಗೆ ತೆರಳಲು ದಾರಿ ಕಾಣದೇ ರೋಗಿಯೊಬ್ಬರು ನರಳಾಡಿದ ಘಟನೆ ಬೆಳಕಿಗೆ ಬಂದಿದೆ. ತುರ್ತು ಚಿಕಿತ್ಸೆಗಾಗಿ ಬಣಕಲ್ ನಿವಾಸಿ ಸಾಧಿಕ್ ಮಂಗಳೂರಿಗೆ ಹೋಗಬೇಕಾಗಿತ್ತು. ಆದರೇ ಚಾರ್ಮಾಡಿ ಘಾಟಿ ಬಂದ್ ಆಗಿರುವ ಕಾರಣ ದಾರಿ ಇರಲಿಲ್ಲ. ಈ ಸಂದರ್ಭದಲ್ಲಿ ಅಲ್ಲಿನ ಸ್ಥಳೀಯರು ಹಾಗೂ ಪೊಲೀಸರ ಸಹಾಯದಿಂದ ಅಂಬುಲೆನ್ಸ್​ಗೆ ದಾರಿ ಮಾಡಿಕೊಟ್ಟಿದ್ದು ಸುರಕ್ಷಿತವಾಗಿ ರೋಗಿಯನ್ನು ಮಂಗಳೂರಿಗೆ ಕಳುಹಿಸಿಕೊಟ್ಟಿದ್ದಾರೆ. ಸಾಧಿಕ್ ಈಗ ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ABOUT THE AUTHOR

...view details