ಚಿಕ್ಕಮಗಳೂರು:ಮೂಡಿಗೆರೆ ತಾಲೂಕಿನ ಭಾರತಿ ಬೈಲು ಗ್ರಾಮದಕಾಫಿತೋಟದಲ್ಲಿ ಹುಲಿಯ ಹೆಜ್ಜೆ ಗುರುತು ಪತ್ತೆಯಾಗಿದ್ದು, ತೋಟದ ಮಾಲೀಕರು ಹಾಗೂ ಕೆಲಸಗಾರರು ಭಯಭೀತರಾಗಿದ್ದಾರೆ.
ಕಾಫಿ ತೋಟದಲ್ಲಿ ಮತ್ತೆ ಕಾಣಿಸಿಕೊಂಡ ಹುಲಿಹೆಜ್ಜೆ: ಆತಂಕದಲ್ಲಿ ಚಿಕ್ಕಮಗಳೂರು ಜನತೆ - hosalli
ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಭಾರತಿ ಬೈಲು ಗ್ರಾಮದಲ್ಲಿ ಕಾಫಿತೋಟದಲ್ಲಿ ಹುಲಿಯ ಹೆಜ್ಜೆ ಗುರುತುಗಳು ಪತ್ತೆಯಾಗಿವೆ. ಇದರಿಂದ ತೋಟದ ಮಾಲೀಕರು ಹಾಗೂ ಕೆಲಸಗಾರರು ಭಯಭೀತರಾಗಿದ್ದಾರೆ.
![ಕಾಫಿ ತೋಟದಲ್ಲಿ ಮತ್ತೆ ಕಾಣಿಸಿಕೊಂಡ ಹುಲಿಹೆಜ್ಜೆ: ಆತಂಕದಲ್ಲಿ ಚಿಕ್ಕಮಗಳೂರು ಜನತೆ Tiger in chikkamagaluru](https://etvbharatimages.akamaized.net/etvbharat/prod-images/768-512-5498031-thumbnail-3x2-mng.jpg)
ಚಿಕ್ಕಮಗಳೂರಲ್ಲಿ ಮತ್ತೆ ಹುಲಿಹೆಜ್ಜೆ: ಆತಂಕದಲ್ಲಿ ಜನತೆ
ಕಳೆದ 15 ದಿನಗಳ ಹಿಂದೆ ಇದೇ ಭಾಗದಲ್ಲಿ ಹುಲಿಯ ಹೆಜ್ಜೆ ಗುರುತು ಪತ್ತೆಯಾಗಿತ್ತು. ಇದೀಗ ಮತ್ತೆ ಭಾರತಿ ಬೈಲು, ಹೊಸಳ್ಳಿ, ಬೆಳಗೊಡು ಸುತ್ತಮುತ್ತಲ ಗ್ರಾಮದಲ್ಲಿ ಹೆಜ್ಜೆ ಗುರುತುಗಳು ಕಂಡುಬಂದಿರುವುದರಿಂದ ಈ ಭಾಗದ ಜನರಲ್ಲಿ ಆತಂಕ ಮನೆಮಾಡಿದೆ.
ಕೂಡಲೇ ಅರಣ್ಯ ಇಲಾಖೆಗೆ ಸ್ಥಳೀಯರು ಸುದ್ದಿಮುಟ್ಟಿಸಿದ್ದಾರೆ. ವಿಷಯ ತಿಳಿದ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಇದು ಹುಲಿಯ ಹೆಜ್ಜೆ ಗುರುತು ಎಂಬುದು ಖಾತರಿಯಾಗಿದೆ.