ಕರ್ನಾಟಕ

karnataka

ETV Bharat / state

ಸ್ವಗ್ರಾಮಕ್ಕೆ ಆಗಮಿಸಿದ ಸಿದ್ಧಾರ್ಥ್​​​ ಹೆಗಡೆ ಪಾರ್ಥಿವ ಶರೀರ

ಕಾಫಿ ಡೇ ಮಾಲೀಕ ಸಿದ್ಧಾರ್ಥ್​ ಹೆಗಡೆಯವರ ಪಾರ್ಥಿವ ಶರೀರ ಸ್ವಗ್ರಾಮ ಚೇತನ ಹಳ್ಳಿಗೆ ಆಗಮಿಸಿದ್ದು, ಅಂತಿಮ ದರ್ಶನಕ್ಕೆ ಸಕಲ ಸಿದ್ಧತೆಯನ್ನು ಕುಟುಂಬವರ್ಗ ಮಾಡಿಕೊಂಡಿದೆ.

By

Published : Jul 31, 2019, 6:06 PM IST

Updated : Jul 31, 2019, 6:11 PM IST

ಸ್ವಗ್ರಾಮಕ್ಕೆ ಆಗಮಿಸಿದ ಸಿದ್ಧಾರ್ಥ್ ಹೆಗಡೆ ಪಾರ್ಥಿವ ಶರೀರ

ಚಿಕ್ಕಮಗಳೂರು: ಕಾಫಿ ಡೇ ಮಾಲೀಕ ಸಿದ್ಧಾರ್ಥ್ ಹೆಗಡೆಯವರ ಪಾರ್ಥಿವ ಶರೀರ ಸ್ವಗ್ರಾಮ ಚೇತನಹಳ್ಳಿಗೆ ಆಗಮಿಸಿದ್ದು, ಅಂತಿಮ ದರ್ಶನಕ್ಕೆ ಸಕಲ ಸಿದ್ಧತೆಯನ್ನು ಕುಟುಂಬವರ್ಗ ಮಾಡಿಕೊಂಡಿದೆ.

ಸ್ವಗ್ರಾಮಕ್ಕೆ ಆಗಮಿಸಿದ ಸಿದ್ಧಾರ್ಥ್ ಹೆಗಡೆ ಪಾರ್ಥಿವ ಶರೀರ

ಚಿಕ್ಕಮಗಳೂರಿನಿಂದ ಪಾರ್ಥಿವ ಶರೀರವನ್ನು ವಿಶೇಷ ತುರ್ತು ವಾಹನದಲ್ಲಿ ತರಲಾಯಿತು. ಈಗಾಗಲೇ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆಯಲು ಚೇತನಹಳ್ಳಿ ಸುತ್ತಮುತ್ತಲ ಗ್ರಾಮಸ್ಥರು, ಕಾಫಿ ಎಸ್ಟೇಟ್ ಕೂಲಿ ಕಾರ್ಮಿಕರು ಸೇರಿದಂತೆ ಸಾವಿರಾರು ಮಂದಿ ಆಗಮಿಸಿದ್ದಾರೆ. ಕೆಲ ನಿಮಿಷಗಳ ಕಾಲ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಿದ್ದು, ಬಳಿಕ ಒಕ್ಕಲಿಗ ಸಂಪ್ರದಾಯದ ಪ್ರಕಾರ ವಿಧಿ ವಿಧಾನ ನೆರವೇರಿಸಿ ಅಂತ್ಯ ಸಂಸ್ಕಾರ ಮಾಡಲಾಗುತ್ತದೆ.

ಈಗಾಗಲೇ ಚೇತನಹಳ್ಳಿಯ ಎಸ್ಟೇಟ್​​ನಲ್ಲಿರುವ ಸಿದ್ಧಾರ್ಥ್ ಮನೆಯಲ್ಲಿ ನೀರವ ಮೌನ ಆವರಿಸಿದ್ದು, ಸಿದ್ಧಾರ್ಥ ಹೆಗಡೆಯವರ ತಾಯಿ ವಸಂತಿ ಹೆಗಡೆ, ಮಾಜಿ ಮುಖ್ಯಮಂತ್ರಿ ಎಸ್​​.ಎಂ.ಕೃಷ್ಣ ಕೂಡ ಸ್ವಗ್ರಾಮಕ್ಕೆ ಆಗಮಿಸಿದ್ದಾರೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೇರಿದಂತೆ ಹಲವು ಗಣ್ಯರು ಪಾಲ್ಗೊಂಡಿದ್ದಾರೆ.

Last Updated : Jul 31, 2019, 6:11 PM IST

ABOUT THE AUTHOR

...view details