ಕರ್ನಾಟಕ

karnataka

ETV Bharat / state

ನೆರೆಹಾನಿ ಪ್ರದೇಶಗಳಿಗೆ ಶೃಂಗೇರಿ ಶಾಸಕ ರಾಜೇಗೌಡ ಭೇಟಿ - Sringeri MLA T. D. Rajegowda

ಶೃಂಗೇರಿ ಶಾಸಕ ಟಿ.ಡಿ.ರಾಜೇಗೌಡ ಚಿಕ್ಕಮಗಳೂರು ಜಿಲ್ಲೆಯ ಹಲವು ನೆರೆಹಾನಿ ಪ್ರದೇಶಗಳಿಗೆ ಭೇಟಿ ನೀಡಿ ವೀಕ್ಷಣೆ ಮಾಡಿದ್ರು.

ಪ್ರವಾಹ ಪೀಡಿತ ಪ್ರದೇಶಕ್ಕೆ ಟಿ.ಡಿ. ರಾಜೇಗೌಡ ಭೇಟಿಪ್ರವಾಹ ಪೀಡಿತ ಪ್ರದೇಶಕ್ಕೆ ಟಿ.ಡಿ. ರಾಜೇಗೌಡ ಭೇಟಿ

By

Published : Aug 12, 2019, 6:01 PM IST

ಚಿಕ್ಕಮಗಳೂರು:ಜಿಲ್ಲೆಯಲ್ಲಿ ಸುರಿದ ಧಾರಾಕಾರ ಮಳೆ ಹಲವು ಅವಾಂತರಗಳನ್ನು ಸೃಷ್ಟಿ ಮಾಡಿದೆ. ಹೀಗಾಗಿ ಇಂದು ಶೃಂಗೇರಿ ಶಾಸಕ ಟಿ.ಡಿ.ರಾಜೇಗೌಡ ನೆರೆಹಾನಿ ಪ್ರದೇಶಗಳಿಗೆ ಭೇಟಿ ನೀಡಿದ್ರು.

ಎನ್.ಆರ್. ಪುರ ತಾಲೂಕಿನ ಕಾನೂರು ಗ್ರಾಮ ಪಂಚಾಯತ್​​​ ವ್ಯಾಪ್ತಿಯಲ್ಲಿ ಬರುವ ಹರಾವರಿ ಗ್ರಾಮದಲ್ಲಿ ಸುರಿದ ಮಹಾಮಳೆಗೆ ಸುಮಾರು 5ರಿಂದ 6 ಕೆರೆಯ ಕೋಡಿ ಒಡೆದು ಅಕ್ಕಪಕ್ಕದಲ್ಲಿದ್ದಂತಹ ತೋಟಗಳಿಗೆ ನೀರು ನುಗ್ಗಿದೆ.

ನೆರೆಹಾನಿ ಪ್ರದೇಶಗಳಿಗೆ ಟಿ.ಡಿ.ರಾಜೇಗೌಡ ಭೇಟಿ

ಇದರಿಂದ ಈ ಭಾಗದಲ್ಲಿ 70 ಎಕರೆಗೂ ಅಧಿಕ ತೋಟ ಕೊಚ್ಚಿ ಹೋಗಿದ್ದು, ಸಾವಿರಾರು ಅಡಿಕೆ, ತೆಂಗಿನ ಮರಗಳು, ಕಾಫಿ ಗಿಡಗಳು ಕೊಚ್ಚಿಕೊಂಡು ಹೋಗಿವೆ. ಈ ಎಲ್ಲಾ ಸ್ಥಳಗಳಿಗೆ ಶೃಂಗೇರಿ ಶಾಸಕ ಟಿ. ಡಿ.ರಾಜೇಗೌಡ ಭೇಟಿ ನೀಡಿ ಸ್ಥಳ ವೀಕ್ಷಣೆ ಮಾಡಿದರು.

ABOUT THE AUTHOR

...view details