ಕರ್ನಾಟಕ

karnataka

ETV Bharat / state

ಚಿಕ್ಕಮಗಳೂರು: ಹೆತ್ತ ತಾಯಿಯನ್ನೇ ಮಚ್ಚಿನಿಂದ ಕೊಂದ ಪಾಪಿ ಪುತ್ರ - ತಾಯಿಯನ್ನೇ ಕೊಂದ ಮಗ

ಮಗನೇ ತಾಯಿಯನ್ನು ಮಚ್ಚಿನಿಂದ ಕೊಚ್ಚಿ ಕೊಂದ ಪ್ರಕರಣ ಚಿಕ್ಕಮಗಳೂರು ಜಿಲ್ಲೆಯ ಗೌರಿ ಕಾಲುವೆಯಲ್ಲಿ ಬೆಳಕಿಗೆ ಬಂದಿದೆ.

son kills mother in chikmagalore
ಮಗನಿಂದಲೇ ತಾಯಿಯ ಹತ್ಯೆ

By

Published : Sep 23, 2021, 10:49 PM IST

ಚಿಕ್ಕಮಗಳೂರು: ಹೆತ್ತ ಮಗನೇ ತಾಯಿಯನ್ನು ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿರುವ ಅಮಾನವೀಯ ಘಟನೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ನಡೆದಿದೆ.

ಚಿಕ್ಕಮಗಳೂರು ನಗರದ ಗೌರಿ ಕಾಲುವೆಯಲ್ಲಿ ಈ ಘಟನೆ ನಡೆದಿದೆ. ಸುಧಾ (48) ಕೊಲೆಯಾದವರು. ದುಶ್ಯಂತ್ (28) ಹೆತ್ತವಳನ್ನೇ ಹತ್ಯೆಗೈದ ಆರೋಪಿ. ದುಶ್ಯಂತ್​ ತನ್ನ ತಾಯಿಯನ್ನೇ ಕೊಲೆ ಮಾಡಿ ಮನೆಯಲ್ಲಿ ಶವದ ಮುಂದೆಯೇ ಕುಳಿತಿದ್ದ ಎನ್ನಲಾಗಿದೆ.

ಮಗನಿಂದಲೇ ತಾಯಿಯ ಹತ್ಯೆ

ಮಧ್ಯಾಹ್ನದ ಸಮಯದಲ್ಲಿ ಕೊಲೆ ಮಾಡಿರುವ ಸಾಧ್ಯತೆ ಇದ್ದು, ಸಂಜೆ 5.45 ಕ್ಕೆ ಕಿರಿಯ ಪುತ್ರ ಸಂತೋಷ್ ಮನೆಗೆ ಬಂದಾಗ ತಾಯಿ ಕೊಲೆಯಾಗಿರುವುದು ಬೆಳಕಿಗೆ ಬಂದಿದೆ. ಒಮ್ಮೊಮ್ಮೆ ಮಾನಸಿಕ ಅಸ್ವಸ್ಥನಂತೆ ದುಶ್ಯಂತ್ ವರ್ತಿಸುತ್ತಿದ್ದ ಎಂದು ಹೇಳಲಾಗ್ತಿದ್ದು, ಸ್ಥಳಕ್ಕೆ ಬಸವನಹಳ್ಳಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿ, ಆರೋಪಿಯನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ABOUT THE AUTHOR

...view details