ಕರ್ನಾಟಕ

karnataka

By

Published : Nov 7, 2020, 1:01 PM IST

ETV Bharat / state

ಚೆಕ್​ಬೌನ್ಸ್​ ಪ್ರಕರಣ: ಸಿದ್ದಾರ್ಥ್ ಪತ್ನಿಗೆ ಜಾಮೀನು ಮಂಜೂರು

ಮಾಳವಿಕ ಸಿದ್ದಾರ್ಥ ಹೆಗ್ಡೆ ಸೇರಿದಂತೆ ಕಂಪನಿಯ 6 ನಿರ್ದೇಶಕರು ಮೂಡಿಗೆರೆಯ ಜೆಎಂಎಫ್ ಸಿ ನ್ಯಾಯಾಲಯಕ್ಕೆ ಹಾಜರಾಗಿ ಜಾಮೀನು ಪಡೆದುಕೊಂಡಿದ್ದಾರೆ.

Siddharth Hegde's wife Malavika gets bail
ಸಿದ್ದಾರ್ಥ್ ಪತ್ನಿಗೆ ಜಾಮೀನು

ಚಿಕ್ಕಮಗಳೂರು: ಕಾಫಿ ಡೇ ಮಾಲೀಕ ದಿ. ಸಿದ್ದಾರ್ಥ್ ಹೆಗ್ಡೆ, ಅವರ ಧರ್ಮಪತ್ನಿ ಮಾಳವಿಕಾ ಅವರಿಗೆ ಮೂಡಿಗೆರೆಯ ಜೆ ಎಂ ಎಫ್ ಸಿ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.

ಕಾಫಿ ಬೆಳೆಗಾರ ನಂದೀಶ್ ಎಂಬುವವರು ಎ ಬಿ ಸಿ ಕಂಪನಿಯವರು ನೀಡಿದಂತಹ ಚೆಕ್ ಬೌನ್ಸ್ ಆಗಿದೆ ಎಂದು ಈ ಹಿಂದೆ ನ್ಯಾಯಾಲಯದ ಮೊರೆ ಹೋಗಿದ್ದರು. ಈ ಹಿನ್ನೆಲೆ ಮಾಳವಿಕಾ ಸಿದ್ಧಾರ್ಥ್ ಸೇರಿದಂತೆ 08 ಜನರಿಗೆ ಮೂಡಿಗೆರೆಯ ಜೆಎಂಎಫ್​​​​​ಸಿ ನ್ಯಾಯಾಲಯ ವಾರಂಟ್ ಜಾರಿ ಮಾಡಿತ್ತು. ಕೊರೊನಾ ಕಾರಣದಿಂದ ಎಬಿಸಿ ಕಂಪನಿಯ ಯಾವುದೇ ನಿರ್ದೇಶಕರುಗಳು ಈ ಹಿಂದೆ ನ್ಯಾಯಾಲಯಕ್ಕೆ ಹಾಜರಾಗಲು ಸಾಧ್ಯವಾಗಿರಲಿಲ್ಲ. ನ್ಯಾಯಾಲಯಕ್ಕೆ ಹಾಜರಾಗದ ಕಾರಣ ಮೂಡಿಗೆರೆಯ ನ್ಯಾಯಾಲಯ ಬಂಧನ ವಾರಂಟ್​ ಹೊರಡಿಸಿತ್ತು, ಇದೀಗ ಮಾಳವಿಕ ಸಿದ್ದಾರ್ಥ ಹೆಗ್ಡೆ ಸೇರಿದಂತೆ ಕಂಪನಿಯ 06 ನಿರ್ದೇಶಕರು ನ್ಯಾಯಾಲಯಕ್ಕೆ ಹಾಜರಾಗಿ ಜಾಮೀನು ಪಡೆದುಕೊಂಡಿದ್ದಾರೆ.

300 ಕ್ಕೂ ಹೆಚ್ಚು ಕಾಫಿ ಬೆಳೆಗಾರರಿಗೆ 100 ಕೋಟಿಗೂ ಅಧಿಕ ಬಾಕಿಯನ್ನು ಎಬಿಸಿ ಕಂಪನಿ ಉಳಿಸಿಕೊಂಡಿತ್ತು. ಈ ಕುರಿತು ಕೆಲ ಕಾಫಿ ಬೆಳೆಗಾರರು ಮೂಡಿಗೆರೆ ನ್ಯಾಯಾಲಯದ ಮೆಟ್ಟಿಲು ಹತ್ತಿದ್ದರು.

ABOUT THE AUTHOR

...view details