ಕರ್ನಾಟಕ

karnataka

ETV Bharat / state

ಎಲುಬಿಲ್ಲದ ನಾಲಿಗೆ ಏನು ಬೇಕಾದರೂ ಹೇಳುತ್ತೆ : ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ

ನೆಲೆ ಇಲ್ಲದ ಕಾಂಗ್ರೆಸ್ ಮಾನಸಿಕ ಸ್ಥಿಮಿತತೆ ಕಳೆದುಕೊಂಡಿದೆ. ಎಲುಬಿಲ್ಲದ ನಾಲಿಗೆ ಏನು ಬೇಕಾದರೂ ಹೇಳುತ್ತೆ. ಕಾಂಗ್ರೆಸ್ ಮನಸ್ಥಿತಿ ಭಯೋತ್ಪಾದನೆಯನ್ನ ಪ್ರೋತ್ಸಾಹಿಸೋದಾಗಿತ್ತು..

By

Published : Aug 24, 2021, 3:41 PM IST

shobha karanlaje statement against druva narayan
ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ

ಚಿಕ್ಕಮಗಳೂರು :ಆರ್​ಎಸ್​ಎಸ್​​-ತಾಲಿಬಾನ್ ಎರಡೂ ಒಂದೇ ಎಂಬ ಕೆಪಿಸಿಸಿ ಕಾರ್ಯಧ್ಯಕ್ಷ ಆರ್. ಧ್ರುವನಾರಾಯಣ್ ಅವರ ಹೇಳಿಕೆಗೆ ಚಿಕ್ಕಮಗಳೂರಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಕಿಡಿಕಾರಿದ್ದಾರೆ.

ಆರ್ ಧ್ರುವನಾರಾಯಣ್ ಅವರ ವಿರುದ್ಧ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಮಾತನಾಡಿರುವುದು..

ನೆಲೆ ಇಲ್ಲದ ಕಾಂಗ್ರೆಸ್ ಮಾನಸಿಕ ಸ್ಥಿಮಿತತೆ ಕಳೆದುಕೊಂಡಿದೆ. ಎಲುಬಿಲ್ಲದ ನಾಲಿಗೆ ಏನು ಬೇಕಾದರೂ ಹೇಳುತ್ತೆ. ಕಾಂಗ್ರೆಸ್ ಮನಸ್ಥಿತಿ ಭಯೋತ್ಪಾದನೆಯನ್ನ ಪ್ರೋತ್ಸಾಹಿಸೋದಾಗಿತ್ತು. ಅದಕ್ಕೆ ಅವರೇ ಕಾಶ್ಮೀರದಲ್ಲಿ ಸಮಸ್ಯೆಯನ್ನ ಜೀವಂತವಾಗಿಟ್ಟಿದ್ದರು. ಈಗ ಕಾಶ್ಮೀರದ ಸಮಸ್ಯೆ ಬಗೆಹರಿದಿದ್ದು, ಭಯೋತ್ಪಾದಕರನ್ನ ಮಟ್ಟ ಹಾಕಲಾಗಿದೆ.

ಇದನ್ನೂ ಓದಿ:ತಾಲಿಬಾನಿ ಹೇಳಿಕೆಗೆ ಧ್ರುವನಾರಾಯಣ ವಿರುದ್ಧ ಬಿಜೆಪಿ ಆಕ್ರೋಶ: ಮನೆಗೆ ಮುತ್ತಿಗೆ ಹಾಕುವ ಎಚ್ಚರಿಕೆ..!

ಕಾಂಗ್ರೆಸ್​​ನವರು ಮಾನಸಿಕ ಸ್ಥಿಮಿತತೆ ಕಳೆದುಕೊಂಡು ಈ ರೀತಿ ಹೇಳಿಕೆ ನೀಡುತ್ತಿದ್ದಾರೆ. ಯಾರು ದೇಶ ದ್ರೋಹಿಗಳು, ದೇಶಭಕ್ತರು ಯಾರೆಂದು ಜನರಿಗೆ ಗೊತ್ತು. ಅವರು ಉತ್ತರಿಸುತ್ತಾರೆ ಎಂದು ಕರಂದ್ಲಾಜೆ ಹೇಳಿದರು.

ಇದನ್ನೂ ಓದಿ:ಕಾಂಗ್ರೆಸ್​ನಲ್ಲಿ ಪ್ರಮೋಷನ್ ಬೇಕು ಎಂದರೆ ಜೈಲಿಗೆ ಹೋಗಬೇಕು: ಸಿ ಟಿ ರವಿ ವ್ಯಂಗ್ಯ

ABOUT THE AUTHOR

...view details