ಕರ್ನಾಟಕ

karnataka

ETV Bharat / state

ಬಡತನದಲ್ಲಿ ಅರಳಿದ ಚಿಕ್ಕಮಗಳೂರಿನ ಪ್ರತಿಭೆ: ಈಗ ಅಂತಾರಾಷ್ಟ್ರೀಯ ಕಬಡ್ಡಿ ಪ್ಲೇಯರ್​​​ - Shashikumar of Chikkamagalur is a national kabaddi player

ಕಡು ಬಡತನವಿದ್ರು ಸ್ಫೋರ್ಟ್ಸ್​ ಕನಸು ಮಾತ್ರ ಕರಗ್ತಾ ಇರ್ಲಿಲ್ಲ. ಕಬಡ್ಡಿ ಆಟವೇ ತನ್ನ ಸರ್ವಸ್ವವೆಂದು ಆ ವ್ಯಕ್ತಿ ಅಂದುಕೊಂಡಿದ್ದ. ಇದೀಗ ಆ ಕನಸು ಕೊನೆಗೂ ನನಸಾಗಿದೆ. ಅಂತಾರಾಷ್ಟ್ರೀಯ ಕಬಡ್ಡಿ ಆಟಗಾರನಾಗಿ ನೇಪಾಳದಲ್ಲಿ ಆಖಾಡಕ್ಕೆ ಇಳಿಯೋಕೆ ಕಾಫಿ ನಾಡಿನ ಬಯಲು ಸೀಮೆಯಿಂದ ಈ ಯುವಕ ಹೊರಟಿದ್ದಾನೆ.

Shashikumar of chikkamagalur was national kabaddi player
ಚಿಕ್ಕಮಗಳೂರಿನ ಶಶಿಕುಮಾರ್​ ರಾಷ್ಟ್ರೀಯ ಕಬ್ಬಡಿ ಪ್ಲೇಯರ್​​​

By

Published : Feb 3, 2022, 10:09 PM IST

Updated : Feb 3, 2022, 10:19 PM IST

ಚಿಕ್ಕಮಗಳೂರು:ಜಿಲ್ಲೆಯ ಅಜ್ಜಂಪುರ ತಾಲೂಕಿನ ಶಶಿಕುಮಾರ್ ಎಂಬ ಯುವಕ ಕಡು ಬಡತನದ ನಡುವೆಯೂ ತರಬೇತಿ ಪಡೆದು ಕಬಡ್ಡಿ ಆಟವನ್ನು ಕಲಿತು, ಇದೀಗ ಅಂತಾರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಬಡತನದಲ್ಲಿ ಅರಳಿದ ಚಿಕ್ಕಮಗಳೂರಿನ ಪ್ರತಿಭೆ

ದಾವಣಗೆರೆಯಲ್ಲಿ ಆಟೋ ಓಡಿಸುತ್ತಲೇ ತರಬೇತಿ ಪಡೆದು, ಅಲ್ಲಿಂದ ಹಲವು ತಂಡಗಳಲ್ಲಿ ಆಡಿ ನಂತರ ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗಿದ್ದಾರೆ. ಇವರ ಈ ಸಾಧನೆಗೆ ಸ್ನೇಹಿತರು ಸಹ ಸಹಾಯವನ್ನು ಮಾಡಿದ್ದು, ಆಟದ ಜೊತೆಯಲ್ಲಿ ಕೆಲವೊಮ್ಮೆ ಹಣದ ನೆರವನ್ನು ನೀಡಿದ್ದಾರೆ‌.

ಇದನ್ನೂ ಓದಿ:ಕಲಿಸುವ ಗುರುವು ಬೀದಿಯಲ್ಲಿ ನಿಂತಿದ್ದಾಗ ಭಾರತ ವಿಶ್ವಗುರು ಆಗಲು ಸಾಧ್ಯವೇ: ಹೆಚ್​ಡಿಕೆ ಕಿಡಿ

ಶಶಿಕುಮಾರ್​​ ನೇಪಾಳದಲ್ಲಿ ನಡೆಯುವ ಕಬಡ್ಡಿ ಪಂದ್ಯಾವಳಿಯಲ್ಲಿ ಆಡಲು ರಾಷ್ಟ್ರೀಯ ಕಬಡ್ಡಿ ತಂಡಕ್ಕೆ ಆಯ್ಕೆಯಾಗಿರುವುದಕ್ಕೆ ಊರಿನವರು ಸಂತಸ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಸ್ನೇಹಿತರು ಮತ್ತು ಸ್ಥಳೀಕರು ಧನ ಸಹಾಯ ಮಾಡಿದ್ದಾರೆ.

Last Updated : Feb 3, 2022, 10:19 PM IST

For All Latest Updates

TAGGED:

ABOUT THE AUTHOR

...view details