ಕರ್ನಾಟಕ

karnataka

By

Published : Nov 29, 2020, 12:44 PM IST

Updated : Nov 29, 2020, 1:41 PM IST

ETV Bharat / state

ಚಿಕ್ಕಮಗಳೂರು: ಓರ್ವ ಪಿಎಸ್​ಐ, ಏಳು ಮಂದಿ ಪೊಲೀಸ್​ ಕಾನ್​ಸ್ಟೇಬಲ್​ಗಳು ಅಮಾನತು

ಚಿಕ್ಕಮಗಳೂರು ಜಿಲ್ಲೆ
Chikkamagaluru district

12:27 November 29

ಕರ್ತವ್ಯಲೋಪ ಆರೋಪದಡಿ ಓರ್ವ ಪಿಎಸ್​ಐ ಮತ್ತು 7ಮಂದಿ ಪೊಲೀಸ್​​ ಕಾನ್​ಸ್ಟೇಬಲ್​ಗಳನ್ನು ಅಮಾನತು ಮಾಡಿರುವ ಪ್ರಕರಣ ಚಿಕ್ಕಮಗಳೂರು ಜಿಲ್ಲೆಯಲ್ಲಿ ನಡೆದಿದೆ.

ಚಿಕ್ಕಮಗಳೂರು:ಕರ್ತವ್ಯಲೋಪ ಆರೋಪದಡಿ ಬಸವನಹಳ್ಳಿ ಪಿಎಸ್ಐ ಮತ್ತು 07 ಜನ ಪೊಲೀಸ್ ಕಾನ್​ಸ್ಟೇಬಲ್​ಗಳನ್ನು ಅಮಾನತು ಮಾಡಲಾಗಿದೆ.  

ನಗರದ ಬಸವನಹಳ್ಳಿ ಪೊಲೀಸ್ ಠಾಣೆಯ ಪಿಎಸ್ಐ ಸುಖೇತ್ ಸೇರಿದಂತೆ ಯುವರಾಜ್, ಲಕ್ಷ್ಮಣ್, ಪ್ರದೀಪ್ ಎಂಬ ಮೂವರು ಕಾನ್​ಸ್ಟೇಬಲ್​ಗಳನ್ನು ಅಮಾನತು ಮಾಡಲಾಗಿದೆ. ಅಮಾನತುಗೊಂಡ ಸಿಬ್ಬಂದಿ ಗಾಂಜಾ ಕೇಸ್​​ನಲ್ಲಿ ಪ್ರಕರಣ ದಾಖಲಿಸುವುದಾಗಿ ವ್ಯಕ್ತಿಗೆ ಬೆದರಿಕೆ ಹಾಕಿ, ಅವರಿಂದ ಸುಮಾರು 3.40 ಲಕ್ಷ ಹಣ ಪಡೆದಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಮತ್ತೊಂದು ಪ್ರಕರಣದಲ್ಲಿ ಕರ್ತವ್ಯಲೋಪ ಆರೋಪದಡಿಯಲ್ಲಿ ತಾಲೂಕಿನ ಆಲ್ದೂರು ಪೊಲೀಸ್ ಠಾಣೆಯ ಕಾನ್​ಸ್ಟೇಬಲ್​ಗಳಾದ ಶಶಿಧರ್, ಸ್ವಾಮಿ, ಅರುಣ್ ಕುಮಾರ್, ನವೀನ್, ಅವರನ್ನು ಅಮಾನತು ಮಾಡಲಾಗಿದೆ. ಅಮಾನತುಗೊಂಡ ಆಲ್ದೂರು ಪೊಲೀಸರು ಹೋಮ್​ ಸ್ಟೇ ಮಾಲೀಕನನ್ನು ಬೆದರಿಸಿ ಲಂಚ ಪಡೆದಿದ್ದ ಆರೋಪದಡಿಯಲ್ಲಿ ಮೇಲಾಧಿಕಾರಿಗಳು ಈ ಕ್ರಮ ಕೈಗೊಂಡಿದ್ದಾರೆ ಎನ್ನಲಾಗುತ್ತಿದೆ.

Last Updated : Nov 29, 2020, 1:41 PM IST

For All Latest Updates

ABOUT THE AUTHOR

...view details