ಕರ್ನಾಟಕ

karnataka

ಚಿಕ್ಕಮಗಳೂರಲ್ಲಿ ಕುರಿ ಮಾಂಸದ ಜತೆ ದನದ ಮಾಂಸ ಬೆರೆಸಿ ಮಾರಾಟ ಆರೋಪ: ನಾಲ್ವರ ಬಂಧನ

By

Published : Apr 19, 2020, 8:50 PM IST

ಕೊಪ್ಪ ತಾಲೂಕಿನ ಜಯಪುರದಲ್ಲಿ ಕುರಿ ಮಾಂಸಕ್ಕೆ ದನದ ಮಾಂಸ ಬೆರೆಸಿ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಚಿಕ್ಕಮಗಳೂರಲ್ಲಿ ಕುರಿ ಮಾಂಸದ ಜತೆ ದನದ ಮಾಂಸ ಬೆರೆಸಿ ಮಾರಾಟ
ಚಿಕ್ಕಮಗಳೂರಲ್ಲಿ ಕುರಿ ಮಾಂಸದ ಜತೆ ದನದ ಮಾಂಸ ಬೆರೆಸಿ ಮಾರಾಟ

ಚಿಕ್ಕಮಗಳೂರು: ಕೊರೊನಾ ವೈರಸ್ ಭೀತಿ ಹಾಗೂ ಲಾಕ್​ಡೌನ್ ನಡುವೆ ಜಿಲ್ಲೆಯಲ್ಲಿ ಕುರಿ ಮಾಂಸಕ್ಕೆ ತುಂಬಾ ಬೇಡಿಕೆ ಬಂದಿದೆ.

ನಾಲ್ವರ ಬಂಧನ

ಈ ನಡುವೆ ಹೆಚ್ಚಿನ ಹಣ ಮಾಡಲು ಕೆಲ ದಂಧೆಕೋರರು ಕುರಿ ಮಾಂಸಕ್ಕೆ ದನದ ಮಾಂಸ ಬೆರೆಸಿ ಮಾರಾಟ ಮಾಡುತ್ತಿರುವ ಘಟನೆ ಬೆಳಕಿಗೆ ಬಂದಿದೆ. ಜಿಲ್ಲೆಯ ಕೊಪ್ಪ ತಾಲೂಕಿನ ಜಯಪುರದಲ್ಲಿ ಈ ಪ್ರಕರಣ ಸಂಬಂಧ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧನ ಮಾಡಿದ್ದು, ಸಿರಾಜ್, ಅನಿಲ್ ಡಿಮೆಲ್ಲೋ, ಡೆನಿಸ್ ಡಿಸೋಜ, ಡೆಂಜಿಲ್ ಬಂಧಿತ ಆರೋಪಿಗಳಾಗಿದ್ದಾರೆ.

ಖಚಿತ ಮಾಹಿತಿ ಮೇರೆಗೆ ಜಯಪುರ ಪೊಲೀಸರು ದಾಳಿ ಮಾಡಿದ್ದು, ಜಯಪುರದ ಎಸ್​ಆರ್ ಮಟನ್ ಸೆಂಟರ್ ಮೇಲೆ ದಾಳಿ ಮಾಡಲಾಗಿದೆ. ಈ ದಂಧೆಕೋರರು ಕೆಲ ಅಮಾಯಕರಿಗೆ ಯಾಮಾರಿಸಿರುವ ಆರೋಪ ಕೇಳಿ ಬಂದಿದೆ.

ಇದೇ ಸಂದರ್ಭದಲ್ಲಿ 20 ಕೆಜಿ ಗೋ ಮಾಂಸವನ್ನು ಪೊಲೀಸರು ವಶಪಡಿಸಿಕೊಂಡಿದ್ದು, ಜಯಪುರ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ.

For All Latest Updates

TAGGED:

ABOUT THE AUTHOR

...view details