ಕರ್ನಾಟಕ

karnataka

ಸರ್ಕಾರದ ವಿರುದ್ಧ ಶಾಸಕ ಟಿ. ಡಿ. ರಾಜೇಗೌಡ ಉಪವಾಸ ಸತ್ಯಾಗ್ರಹ

By

Published : Oct 9, 2020, 3:23 PM IST

ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಮಂಜೂರಾದ ಹಣವನ್ನು ಈ ಸರ್ಕಾರ ತಡೆ ಹಿಡಿದಿದೆ ಎಂದು ಆರೋಪಿಸಿ ಶೃಂಗೇರಿ ಶಾಸಕ ಟಿ. ಡಿ. ರಾಜೇಗೌಡ ಉಪವಾಸ ಸತ್ಯಾಗ್ರಹ ಕೈಗೊಂಡಿದ್ದಾರೆ.

Rajegowda protest against Govt anti-farmer policy....
ಶಾಸಕ ಟಿ. ಡಿ. ರಾಜೇಗೌಡ ಉಪವಾಸ ಸತ್ಯಾಗ್ರಹ

ಚಿಕ್ಕಮಗಳೂರು: ಮಾಜಿ ಶಾಸಕ ಡಿ. ಎನ್.​ ಜೀವರಾಜ್​​ ಸರ್ಕಾರದ ಅನುದಾನ ತಡೆ ಹಿಡಿಯುತ್ತಿದ್ದಾರೆ ಹಾಗೂ ಕೇಂದ್ರ-ರಾಜ್ಯ ಸರ್ಕಾರಗಳು ಜನ ವಿರೋಧಿ ಕಾಯ್ದೆಯನ್ನು ಜಾರಿಗೊಳಿಸಿವೆ ಎಂದು ಆರೋಪಿಸಿ ಶೃಂಗೇರಿ ಶಾಸಕ ಟಿ. ಡಿ. ರಾಜೇಗೌಡ ಉಪವಾಸ ಸತ್ಯಾಗ್ರಹ ಕೈಗೊಂಡಿದ್ದಾರೆ.

ಸರ್ಕಾರದ ವಿರುದ್ಧ ಶಾಸಕ ಟಿ. ಡಿ. ರಾಜೇಗೌಡ ಉಪವಾಸ ಸತ್ಯಾಗ್ರಹ

ಜಿಲ್ಲೆಯ ಕೊಪ್ಪ ತಾಲೂಕು ಕಚೇರಿ ಎದುರು ಉಪವಾಸ ಸತ್ಯಾಗ್ರಹ ನಡೆಸಿದ ಅವರು, ಈ ಹಿಂದೆ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಮಂಜೂರಾದ ಹಣವನ್ನು ಈ ಸರ್ಕಾರ ತಡೆ ಹಿಡಿದಿದೆ ಎಂದು ಘೋಷಣೆ ಕೂಗಿದರು.

ರಾಜಕೀಯ ದ್ವೇಷದಿಂದ ಅನುದಾನದ ಹಣವನ್ನು ತಡೆ ಹಿಡಿದಿದ್ದಾರೆ ಎಂದು ಆರೋಪಿಸಿದ ಪ್ರತಿಭಟನಾಕಾರರು, ಹುಲಿ ಯೋಜನೆ, ಬಫರ್ ಝೋನ್​​ ಯೋಜನೆ ತಡೆ ಹಿಡಿಯಬೇಕು ಎಂದು ಒತ್ತಾಯಿಸಿದರು. ಈ ವೇಳೆ ರೈತ ಸಂಘದವರು ಸಾಥ್ ನೀಡಿದರು.

ABOUT THE AUTHOR

...view details